Advertisement

ವೈದ್ಯರ ಸೇವೆ ಶ್ಲಾಘನೀಯ

07:50 PM Jul 02, 2021 | Team Udayavani |

ಬೇಲೂರು: ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದುರೋಗಿಗಳೊಂದಿಗೆ ಕರ್ತವ್ಯ ನಿರ್ವಹಿಸುವ ವೈದ್ಯರ ಸೇವೆ ಶ್ಲಾಘನೀಯ ಎಂದು ಬೇಲೂರು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಪ್ರಭಾಕರ್‌ ಹೇಳಿದರು.

Advertisement

ಪಟ್ಟಣದಕಾವೇರಿ ಕ್ಲಿನಿಕ್‌ನಲ್ಲಿ ಲಯನ್ಸ್‌ ಕ್ಲಬ್‌ ವತಿಯಿಂದಹಮ್ಮಿಕೊಂಡಿದ್ದವೈದ್ಯರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜಕ್ಕೆಹಾಗೂ ಜನರಿಗೆ ವೈದ್ಯರ ಪಾತ್ರ ಬಹುಮುಖ್ಯ. ಅವರ ಪ್ರಾಮುಖ್ಯತೆ ಮತ್ತುಜವಾಬ್ದಾರಿ ಮಹತ್ವ ಪಡೆದುಕೊಂಡಿರುತ್ತದೆ. ವೈದ್ಯರ ಕೆಲಸ, ಪ್ರವೃತ್ತಿ,ಜವಾಬ್ದಾರಿ ಹಾಗೂ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದ್ದು, ವೈದ್ಯರಿಗೆ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಲಯನ್ಸ್‌ ಸಂಸ್ಥೆ ಹಲವಾರುಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

ವೈದ್ಯ ಡಾ.ಸಂತೋಷ ಮಾತನಾಡಿ, ಭಾರತದಲ್ಲಿ ಪ್ರಸಿದ್ಧ ವೈದ್ಯಬಿ.ಸಿ.ರಾಯ್‌ ಅವರ ಗೌರವಾರ್ಥ ವೈದ್ಯರ ದಿನವನ್ನು ಜು.1ರಂದುಆಚರಿಸಲಾಗುತ್ತದೆ ಎಂದರು. ವೈದ್ಯ ಚಂದ್ರಮೌಳಿ ಮಾತನಾಡಿ, ವೈದ್ಯರ ನಿಷ್ಠೆಶ್ರಮ ಹಾಗೂ ನಿಸ್ವಾರ್ಥ ಭಾವದಿಂದ ನೀಡುವ ಆರೈಕೆಗೆ ಮೌಲ್ಯ ಕಟ್ಟಲುಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ವೈದ್ಯರಾದ ಡಾ.ಚಂದ್ರಮೌಳಿ, ಡಾ.ಗುರುಚರಣ್‌, ಡಾ.ಸಂತೋಷ್‌ ಅವರನ್ನು ಅಭಿನಂದಿಸಲಾಯಿತು. ಮಾಜಿಅಧ್ಯಕ್ಷ ಬಿಟ್ರಾವಳ್ಳಿ ಉಮೇಶ್‌, ಕೆ.ಎಲ್‌.ಸುರೇಶ್‌, ಕಾರ್ಯದರ್ಶಿಮಂಜುನಾಥ್‌, ಸದಸ್ಯರಾದ ನೌಷದ್‌, ನರಸಿಂಹಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next