Advertisement

ಕೊರೊನಾದಿಂದ ಸಹಸ್ರಾರು ಕುಟುಂಬ ಅನಾಥ

07:24 PM Jun 15, 2021 | Team Udayavani |

ಮಂಡ್ಯ: ಪ್ರಕೃತಿ ವಿಕೋಪ ಬಂದಾಗ ದೊಡ್ಡ ಮಟ್ಟದಅನಾಹುತಗಳು ಸಂಭವಿಸಲಿದೆ. ಅದರಂತೆಕೊರೊನಾ ದಿಂದ ರಾಜ್ಯದಲ್ಲಿ ಅನೇಕ ಕುಟುಂಬಗಳು ಅನಾಥವಾಗಿವೆ ಎಂದು ಮಾಜಿ ಮುಖ್ಯಮಂತ್ರಿಎಚ್‌. ಡಿ.ಕುಮಾರಸ್ವಾಮಿ ಹೇಳಿದರು.

Advertisement

ತಾಲೂಕಿನ ಹನಕೆರೆ ಗ್ರಾಮದಲ್ಲಿ ಶಾಸಕ ಎಂ. ಶ್ರೀನಿವಾಸ್‌ ಅಭಿಮಾನಿ ಬಳಗದಿಂದ ನಡೆದ ಕಾರ್ಯ ಕ್ರಮದಲ್ಲಿ ಕೊರೊನಾ ವಾರಿಯರ್ ಹಾಗೂ ಬಡವ ರಿಗೆಆಹಾರ, ಆರೋಗ್ಯ ಕಿಟ್‌ ವಿತರಿಸಿ ಮಾತನಾಡಿದರು.

ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು,ಅನೇಕ ಕುಟುಂಬಗಳು ಮಕ್ಕಳು, ಹಿರಿಯ ತಂದೆ-ತಾಯಿ, ದುಡಿಯುವ ಮಂದಿಯನ್ನು ಕಳೆದುಕೊಂಡು ಅನಾಥವಾಗಿವೆ. ಸಾವಿರಾರು ಕುಟುಂಬಗಳಲ್ಲಿ ಸಮಸ್ಯೆಗಳಿವೆ. ಇದು ಯಾರ ತಪ್ಪು, ಯಾರದ್ದುಸರಿ ಎಂದು ಚರ್ಚೆ ಮಾಡುವ ಸಮಯವಲ್ಲ. ಆದರೆಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ಅದರಲ್ಲೂಜವಾಬ್ದಾರಿಯುತ ಸ್ಥಾನದಲ್ಲಿರುವವರು ನಿಸ್ವಾರ್ಥಭಾವದಿಂದ ಬಡವರಿಗೆ ನೆರವಾಗಬೇಕು ಎಂದರು.

ಶಾಸಕರಾದ ಎಂ.ಶ್ರೀನಿವಾಸ್‌, ಕೆ.ಟಿ.ಶ್ರೀಕಂಠೇಗೌಡ, ಎನ್‌.ಅಪ್ಪಾಜಿಗೌಡ, ರಾಜ್ಯ ಯುವ ಘಟಕದಅಧ್ಯಕ್ಷ ನಿಖೀಲ್‌ಕುಮಾರಸ್ವಾಮಿ, ನಗರಸಭೆ ಅಧ್ಯಕ್ಷಎಚ್‌.ಎಸ್‌.ಮಂಜು, ಮನ್‌ಮುಲ್‌ ಅಧ್ಯಕ್ಷ ರಾಮಚಂದ್ರು, ಉಪಾಧ್ಯಕ್ಷ ಎಂ.ಎಸ್‌.ರಘುನಂದನ್‌,ಜಿಪಂ ಸದಸ್ಯ ಎಚ್‌.ಎನ್‌.ಯೋಗೇಶ್‌, ಜೆಡಿಎಸ್‌ಜಿಲ್ಲಾ ಧ್ಯಕ್ಷ ಡಿ.ರಮೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next