Advertisement

ನಗರದ ಮಾಂಸದಂಗಡಿ ಮುಂದೆ ಜನ ಜಂಗುಳಿ

01:55 PM May 03, 2021 | Team Udayavani |

ಬೆಂಗಳೂರು: ಕರ್ಫ್ಯೂ ಹಿನ್ನೆಲೆಯಲ್ಲಿ ಜನರುಮನೆಯಲ್ಲೆ ಉಳಿದು ಭಾನುವಾರ ಮೀನು,ಮಾಂಸದಂಗಡಿಗಳಲ್ಲಿ ಬೆಳಗ್ಗೆ ಸಾಲುಗಟ್ಟಿ ನಿಂತಿದ್ದರು.ಶಿವಾಜಿನಗರ ರಸೆಲ್‌ ಮಾರುಕಟ್ಟೆ, ಕೆ.ಆರ್‌ಮಾರುಕಟ್ಟೆ, ಶ್ರೀರಾಂಪುರ, ಮಡಿವಾಳ ಸೇರಿದಂತೆಹಲವು ಕಡೆಗಳಲ್ಲಿ ಹೆಚ್ಚಿನ ಜನ ಜಂಗುಳಿ ಇತ್ತು.

Advertisement

ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.ಕೋವಿಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಸರ್ಕಾರ ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಮಾಂಸ ಮತ್ತು ಮೀನುಮಾರಾಟಕ್ಕೆ ಅವಕಾಶ ನೀಡಿದೆ. ಆ ಹಿನ್ನೆಲೆಯಲ್ಲಿ ಅವಧಿ ಮುನ್ನವೇ ಮಾಂಸ ಮತ್ತು ಮೀನು ಖರೀದಿಸಬೇಕುಎಂಬ ಆತುರ ಅವರಲ್ಲಿತ್ತು.

ಹೆಚ್ಚಿನ ವ್ಯಾಪಾರಮಾಡುವ ಸಲುವಾಗಿ ಮತ್ತು ಗ್ರಾಹಕರನ್ನು ಬೇಗನೆಕಳುಹಿಸಿಕೊಡುವ ಸಲುವಾಗಿ ಕೆಲವು ಅಂಗಡಿಗಳಲ್ಲಿಅಧಿಕ ಸಂಖ್ಯೆಯಲ್ಲಿ ಕಾರ್ಮಿಕರಿದ್ದರು. ಹೀಗಾಗಿಕೆಲವೆ ಕೆಲವು ಅಂಗಡಿಗಳಲ್ಲಿ ಸಾಲು ನಿಲ್ಲದೆಗ್ರಾಹಕರು ಮಾಂಸ ಖರೀದಿಸಿದರು.

ಈ ವೇಳೆ ಪ್ರತಿಕ್ರಿಯಿಸಿ ಕೋಳಿ ಮಾಂಸದವ್ಯಾಪಾರಿ ಮಂಜುನಾಥ್‌, ಕೋವಿಡ್‌ ಕರ್ಫ್ಯೂನಡೆಯೂ ಚಿಕ್ಕನ್‌ ಮಾರಾಟ ಉತ್ತಮವಾಗಿ ನಡೆದಿದೆಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next