Advertisement

ದಿಗ್ಬಂಧನ ಹಾಕಿಕೊಂಡ ನಂದೊಳ್ಳಿ ಜನ

09:31 PM May 15, 2021 | Team Udayavani |

ಯಲ್ಲಾಪುರ: ತಾಲೂಕಿನ ಮಾವಿನಮನೆಯಲ್ಲಿ ವಿಪರೀತ ಸೊಂಕಿತರ ಸಂಖ್ಯೆಯಾದ ಬಳಿಕೆ ಇಡೀ ಊರಿನವರೇ ತಮಗೆ ತಾವೇ ದಿಗ್ಬಂಧನ ಹಾಕಿಕೊಂಡಿದ್ದರು. ಊರಿಗೆ ಬರದಂತೆ ಹೊರಗೆ ಹೋಗದಂತೆ ಮಾಡಲಾಗಿತ್ತು. ಈಗ ಸ್ವಲ್ಪ ನಿಯಂತ್ರಣದಲ್ಲಿದೆ. ಆದರೆ ನಂದೊಳ್ಳಿ ಪಂಚಾಯತ ವ್ಯಾಪ್ತಿಯಲ್ಲಿ ಇದೇ ತೆರನಾದ ಪರಿಸ್ಥಿತಿ ಬಂದೊದಗಿದೆ.

Advertisement

ಗುರುವಾರ 39 ಇದ್ದ ಪಾಸಿಟಿವ್‌ ಸಂಖ್ಯೆ ಶುಕ್ರವಾರ 52 ಕ್ಕೆ ಏರಿದೆ. ಇಡೀ ಊರಿಗೆ ಊರೇ ಆತಂಕದಲ್ಲಿದೆ. ಇಲ್ಲಿಯೂ ಊರೊಳಗೆ ಯಾರೂ ಬರದಂತೆ ಹೋಗದಂತೆ ಮತ್ತು ತಮ್ಮ ಮನೆಗಳಿಗೂ ಯಾರೂ ಬರದಂತೆ ದಿಗ್ಬಂಧನ ಹಾಕಿದ್ದಾರೆ.

ಈ ಕಾರ್ಯ ಮಾಡಿ ಮೂರ್ನಾಲ್ಕು ದಿನಗಳಾದರೂ ಸೋಂಕಿತರ ಸಂಖ್ಯೆ ಏರುತ್ತಿದೆ. ಗುಣಮುಖರಾದವರ ಸಂಖ್ಯೆ ಕಡಿಮೆಯಿದೆ. ಸ್ಥಳೀಯ ಪಂಚಾಯತ ಕೋವಿಡ್‌ ಬಗ್ಗೆ ತೆಗೆದುಕೊಳ್ಳುವ ಸುರಕ್ಷತಾ ಕ್ರಮ ತೆಗೆದುಕೊಂಡಿದೆ. ತಹಶೀಲ್ದಾರ್‌ ಸೇರಿದಂತೆ ಸಂಬಂಧಿಸಿದವರು ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಮಾಹಿತಿ ನೀಡುತ್ತಿದ್ದಾರೆ. ಕೆಲವರು ತಂಡ ರಚಿಸಿಕೊಂಡು ಅಗತ್ಯ ವಸ್ತುಗಳನ್ನು ಮನೆ ಮನೆಗೆ ಕಳಿಸುತ್ತಿದ್ದಾರೆ. ಅದಕ್ಕಾಗಿ ಸಹಾಯವಾಣಿಯನ್ನೂ ಮಾಡಿಕೊಂಡಿದ್ದಾರೆ. ಕಂಟೇನ್ಮೆಂಟ್‌ ಝೋನ್‌ ಎಂದು ಗುರುತಿಸಲ್ಪಟ್ಟಿದೆ. ಏನಿದ್ದರೂ ಈ ಭಾಗ ಸದ್ಯ ಆತಂಕದಲ್ಲಿದ್ದು ಜನರಲ್ಲಿ ಧೈರ್ಯ ತುಂಬುವ ಕಾರ್ಯವಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next