Advertisement

ಕೋವಿಡ್ ನಿಂದ ಜನಜೀವನ ತತ್ತರ: ದಿನಸಿ ವಿತರಿಸಿದ ನಟಿ ರಾಧಿಕಾ ಕುಮಾರಸ್ವಾಮಿ

03:53 PM Apr 10, 2020 | Nagendra Trasi |

ಬೆಂಗಳೂರು: ಕೋವಿಡ್ ನಿಂದ ಕಂಗಲಾದ ಜನರ ಸಹಾಯಕ್ಕೆ ಅನೇಕರು ಧಾವಿಸುತ್ತಿದ್ದಾರೆ. ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಕಷ್ಟದಲ್ಲಿರುವವರ ಸಹಾಯಕ್ಕೆ ನಿಲ್ಲುತ್ತಿದ್ದಾರೆ. ಈಗಾಗಲೇ ಅನೇಕ ಸಿನಿಮಾ ಕಲಾವಿದರು, ಅವರ ಅಭಿಮಾನಿ ವರ್ಗ ಅಗತ್ಯ ವಸ್ತುಗಳನ್ನು ಹಂಚುತ್ತಿದೆ.

Advertisement

ಈಗ ನಟಿ ರಾಧಿಕಾ ಅವರ ಸರದಿ. ನಟಿ ರಾಧಿಕಾ ಕೂಡಾ ಬೆಂಗಳೂರಿನ ಬೇರೆ ಬೇರೆ ಏರಿಯಾಗಳಲ್ಲಿ ದಿನಸಿ ವಿತರಿಸುವ ಮೂಲಕ ಕೋವಿಡ್ ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ನಿಂತಿದ್ದಾರೆ. ಮಾಗಡಿ ರೋಡ್, ಗೋವಿಂದ ಪುರ, ಆರ್ ಪಿಸಿ ಲೇಔಟ್, ಮೂಡಲಪಾಳ್ಯ, ಮಾಲಗಾಳ, ದೀಪಾಂಜಲಿ ನಗರ, ನಾಯಂಡನಹಳ್ಳಿ, ಕೆಂಗೇರಿಗಳಲ್ಲಿ ಅಗತ್ಯ ದಿನಸಿ ಹಂಚಿದ್ದಾರೆ. ಅಲ್ಲಿನ ನಿವಾಸಿಗಳು ಸರತಿಯಲ್ಲಿವೆ ಬಂದು ದಿನಸಿ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next