Advertisement

ಭಗವಂತ ನೀಡಿದ ಶಾಪ

09:47 AM Jun 27, 2021 | Team Udayavani |

ಶಾಪ…

Advertisement

ವಾಹನದ ಸದ್ದು ಸಪ್ಪಳವಿಲ್ಲದೆ ಊರುಕೇರಿ ಹಳ್ಳಿದಿಲ್ಲಿಯೆಲ್ಲವೂ ಸ್ಥಬ್ದ

ಕೇಳಬೇಕೆನಿಸಿದರೂ ಕೇಳಲಾಗದು

ಶಾಲೆಯಲ್ಲಿನ ಮಕ್ಕಳ ಆಟ, ಪಾಠ, ತಟ್ಟೆ ಶಬ್ದ

ವಾದ್ಯ, ವಾಲಗ, ಚೆಂಡೆ, ಮದ್ದಳೆ

Advertisement

ಆಡಂಬರದ ಡಿಜೆ ಇಲ್ಲದೆ ಊರಿಗೆ ಊರೇ ನಿಶ್ಯಬ್ದ

ನಾನು ನನ್ನದು ಎನ್ನುವ ಅಹಂಕಾರಿ ಜನ್ಮ

ಕೊನೆಗೊಂದು ಹನಿ ನೀರಿಲ್ಲದೆಯೇ ಪರಿಶುದ್ಧ

ಹಲವು ರೂಪದಲ್ಲಿ ರಣಕೇಕೆ ಹಾಕುತಿಹುದು

ಕರುಣೆಯಿಲ್ಲದ ಮಾರಿ ಕೊರೊನಾ

ಬಡವ ಬಲ್ಲಿದ ಸಿರಿವಂತನೆನ್ನದೆ

ಹಾರಿ ಹೋಗುತ್ತಲಿಹುದು ಪ್ರಾಣ

ಎಚ್ಚರಿಕೆಯಿಲ್ಲದ ಜೀವಕ್ಕೆ ನಿರ್ಲಕ್ಷ್ಯದ

ಪಾಡಿಗೆ ತಪ್ಪದಯ್ಯ ಮರಣ

ಕ್ಷಣ ಮಾತ್ರದಲ್ಲಿ ಹಾಳುಕೆಡುಹದಿರಿ

ಹೆತ್ತಮಾತೆಯ ಗರ್ಭದ ಆ ನಿಮ್ಮ ಪುಣ್ಯ ಜನನ

ಹಚ್ಚಹಸುರಿನ ತಂಪು ಕಂಪಿನ ಸೊಬಗಿನ

ರುಂಡ ಕತ್ತರಿಸಿದ ಮಾನವಭೂಪ

ಪ್ರಕೃತಿ ಮಾತೆಯ ಮನ ಕೆಣಕಿದರೆ

ಬರದಿರುವುದೇ ಆಕೆಗೆ ಕೋಪ

ಹೆಜ್ಜೆಹೆಜ್ಜೆಗೂ ಕಜ್ಜಕಾರ್ಯದಲಿ

ದ್ವಿಗುಣವಾಯಿತು ನರಜನ್ಮದ ಪಾಪ

ಈ ಕೊರೊನಾ ಎನ್ನುವುದು ಏನಿಲ್ಲ ಮನುಜ!!!

ನೀ ಮಾಡಿದ ಪಾಪದ ಪ್ರತಿಫ‌ಲ ಭಗವಂತ

ನೀಡಿದ ಶಾಪ

 

-ಕಿರಣ್‌ ಕಕ್ಕಿಂಜೆ

Advertisement

Udayavani is now on Telegram. Click here to join our channel and stay updated with the latest news.

Next