Advertisement

ಯುಗಾದಿ ಹಬ್ಬದ ಸಂಭ್ರಮ ಕಸಿದ ಕೋವಿಡ್ ಮಹಾಮಾರಿ

04:02 PM Apr 15, 2020 | sudhir |

ಉಡುಪಿ/ಕುಂದಾಪುರ/ಮಲ್ಪೆ : ಹಿಂದೂಗಳ ಅತ್ಯಂತ ಸಂಭ್ರಮದ ಹಬ್ಬ ಯುಗಾದಿ. ಈ ಬಾರಿ ಕೋವಿಡ್ ಮಹಾಮಾರಿ ವಕ್ಕರಿಸಿದ್ದರಿಂದ ಹಬ್ಬವು ಕಳೆಗುಂದಿದೆ. ಜನರು ಮನೆಯಿಂದ ಹೊರಗೆ ಹೋಗಲಾರದ ಸ್ಥಿತಿಯಲ್ಲಿ ಹಬ್ಬದ ಸಂಭ್ರಮ ಕಳೆದುಕೊಂಡಿದೆ.

Advertisement

ಸಾಮಾನ್ಯವಾಗಿ ಮನೆಮಕ್ಕಳು, ಸಂಬಂಧಿಕರು ಒಟ್ಟಿಗೆ ಸೇರಿಕೊಂಡು ಆಚರಿಸುವ ಹಬ್ಬವಾಗಿದ್ದು, ಈ ಬಾರಿ ಒಬ್ಬರನ್ನೊಬ್ಬರು ಭೇಟಿಯಾಗದಂತೆಯೂ ಮಾಡಿದೆ. ಪೇಟೆಯಲ್ಲಿ ಅಂಗಡಿಗಳು ಮುಚ್ಚಿದ್ದರಿಂದ ಹೊಸ ವರ್ಷಕ್ಕೆ ಯಾವುದೇ ವಿಶೇಷ ಖರೀದಿಗಳಿಲ್ಲ. ಜನರು ದೇವಸ್ಥಾನಗಳಿಗೆ ತೆರಳಿ ದರ್ಶನವೂ ಪಡೆಯದಂತಾಗಿದೆ. ಹಾಗಾಗಿ ಜನರು ಮನೆಯಲ್ಲಿ ಸರಳ ಹಬ್ಬ ಆಚರಿಸಿದರು.

ಮೀನು ಹಿಡಿಯುವ ಸಂಪ್ರದಾಯ ಇಲ್ಲ
ಕರಾವಳಿ ಸಂಪ್ರದಾಯಗಳ ನಾಡು, ಪ್ರತಿಯೊಂದು ಹಬ್ಬದ ಆಚರಣೆಯ ಹಿಂದೆಯೂ ಒಂದೊಂದು ನಂಬಿಕೆಯಿರುತ್ತದೆ. ಮಲ್ಪೆ ತೊಟ್ಟಂ ಸಮೀಪದ ಕುಮೆಕೆರೆಯಲ್ಲಿ ಪ್ರತಿವರ್ಷ ಸೌರಮಾನ ಯುಗಾದಿಯಂದು ಊರಿ ನವರೆಲ್ಲರೂ ಸೇರಿ ಬಲೆ ಬೀಸಿ ಮೀನು ಹಿಡಿಯುವ ಸಂಪ್ರದಾಯ ಇತ್ತು. ಆದರೆ ಈ ಬಾರಿ ಲಾಕ್‌ಡೌನ್‌ನಿಂದಾಗಿ ಜನರು ಮನೆಯಿಂದ ಹೊರಗೆ ಬಾರದೇ ಹಲವಾರು ವರ್ಷಗಳ ಸಂಪ್ರದಾಯವನ್ನೆ ಕೈಬಿಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next