Advertisement

ಶ್ರೀನಿವಾಸಪುರದಲ್ಲಿ ಆಕ್ಸಿಜನ್‌ ಘಟಕ, ಕೋವಿಡ್‌ ಕೇಂದ್ರ

06:55 PM May 29, 2021 | Team Udayavani |

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲೂ ಕೊರೊನಾ ಸೋಂಕು ಹರಡಿದೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಸೋಂಕಿತರಸಂಖ್ಯೆ ಹೆಚ್ಚಿದೆ. ಚಿಲೇಪಲ್ಲಿ ಗ್ರಾಮದಲ್ಲಿ ಒಂದೇ ದಿನ 28 ಮಂದಿಗೆ ಸೋಂಕು ದೃಢಪಟ್ಟಿದೆ. ಕೆಲವು ಗ್ರಾಮಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಕ್ಷೇತ್ರದಶಾಸಕ, ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ವಾರದಿಂದ ಕ್ಷೇತ್ರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ. ಗನಿಬಂಡೆಯಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗೆ ಚಾಲನೆ ನೀಡಿದ್ದಾರೆ. ತಾಲೂಕು ಕೇಂದ್ರದಲ್ಲಿ ಆಕ್ಸಿಜನ್‌ ಘಟಕ ನಿರ್ಮಾಣಕ್ಕೂ ಮುಂದಾಗಿದ್ದು, ಇವೆಲ್ಲದರ ಕುರಿತುಉದಯವಾಣಿಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Advertisement

ಶ್ರೀನಿವಾಸಪುರ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣಕ್ಕೆಏನು ಮಾಡುತ್ತಿದ್ದೀರಿ?

ಶ್ರೀನಿವಾಸಪುರದಲ್ಲಿ ಆಕ್ಸಿಜನ್‌ ಉತ್ಪಾದನಾ ಘಟಕ ಹಾಗೂಕೋವಿಡ್‌ ಪರೀಕ್ಷೆಗಾಗಿ ಸುಸಜ್ಜಿತ ಪ್ರಯೋಗಾಲಯವನ್ನು ಇನ್ನು 15ದಿನದೊಳಗೆ ನಿರ್ಮಿಸಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಗುವುದು. ಇದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆದಿದೆ. ಜಿಲ್ಲೆಯಲ್ಲಿ ಮೂರು ಕಡೆ ಮಾತ್ರ ಪ್ರಯೋಗಾಲಯ ಮಾಡಲುಅವಕಾಶಗಳಿದ್ದು, ಇದರಲ್ಲಿ ಶ್ರೀನಿವಾಸಪುರವೂ ಒಂದಾಗಿದೆ.ಪ್ರಯೋಗಾಲಯಕ್ಕೆ ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು,ಪರಿಕರಗಳನ್ನು ಮೂರು ನಾಲ್ಕು ದಿನದಲ್ಲಿ ಅಳವಡಿಸಲು ಕ್ರಮಕೈಗೊಳ್ಳಲಾಗುವುದು. ಇನ್ನೊಂದು ವಾರದಲ್ಲಿ ತಾಲೂಕಿನ ಸರ್ಕಾರಿಆಸ್ಪತ್ರೆಯ ಅವರಣದಲ್ಲಿ ಟೆಸ್ಟಿಂಗ್‌ಲ್ಯಾಬ್‌ ಸ್ಥಾಪಿಸಲಾಗುವುದುಎಂದರು.

ಆಮ್ಲಜನಕ ಕೊರತೆಯನ್ನು ಹೇಗೆ ನೀಗುತ್ತೀರಿ?

ಆಕ್ಸಿಜನ್‌ ಪ್ಲಾಂಟ್‌ ನಿರ್ಮಿಸುವ ಮೂಲಕ ಸರ್ಕಾರಿಆಸ್ಪತ್ರೆಯನ್ನು 60 ಬೆಡ್‌ಗಳ ಸ್ವಾವಲಂಬಿ ಆಸ್ಪತ್ರೆಯಾಗಲಿದೆ. ಇದಕ್ಕೆಅಗತ್ಯವಾದ ಎಲ್ಲಾ ಕ್ರಮ ಕೈಗೊಂಡಿರುವುದಕ್ಕೆ ಸರ್ಕಾರಕ್ಕೆ ಕೃತಜ್ಞತೆಸಲ್ಲಿಸುತ್ತೇನೆ. 30 ಜನಕ್ಕೆ ಆಕ್ಸಿಜನ್‌ ಸೇರಿದಂತೆ ಇತರೆ ಎಲ್ಲಾಸೌಲಭ್ಯಗಳಿಗೆ ಸರ್ಕಾರದ ವ್ಯವಸ್ಥೆಗಳ ಜತೆಗೆ ನಾವು ಕೈಜೋಡಿಸಲುಲ್ಯಾಬ್‌, ಆಕ್ಸಿಜನ್‌ ಪ್ಲಾಂಟ್‌ಗೆ 75 ಲಕ್ಷ ರೂ. ವೆಚ್ಚವನ್ನುಭರಿಸಬೇಕಾಗಿದೆ. ಸಂಸದರು 15 ಲಕ್ಷ ರೂ. ಶಾಸಕರನಿಧಿಯಿಂದ 10 ಲಕ್ಷ ರೂ., ವಿಧಾನ ಪರಿಷತ್‌ ಸದಸ್ಯನಸೀರ್‌ ಆಹಮದ್‌ ಹಾಗೂ ಕೋಚಿಮುಲ್‌ ಅಧ್ಯಕ್ಷನಂಜೇಗೌಡ, ಮಾಜಿ ಶಾಸಕ ಕೊತ್ತೂರುಮಂಜುನಾಥ್‌ ಸೇರಿದಂತೆ ಇನ್ನು ಅನೇಕರ ನೆರವುಪಡೆಯಲಾಗುತ್ತಿದೆ.

Advertisement

ಬೆಡ್ಕೊರತೆ ಹೇಗೆ ಬಗೆ ಹರಿಸಿದ್ದೀರಿ?
ಈಗಾಗಲೇ ಕ್ಷೇತ್ರದ ಖಾಸಗಿ ಕಲ್ಯಾಣ ಮಂದಿರದಲ್ಲಿ 30 ಬೆಡ್‌ಹಾಗೂ ಕಿತ್ತೂರು ರಾಣಿ ಚೆನ್ನಮ ವಸತಿ ಶಾಲೆಯಲ್ಲಿ 30 ಬೆಡ್‌ಅಳವಡಿಸಿ ಚಿಕಿತ್ಸೆಗೆ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ. ಇವು ಶೀಘ್ರವೇ ಕೊರೊನಾ ಚಿಕಿತ್ಸೆಗೆ ಸಜ್ಜಾಗಲಿವೆ. ಕೋವಿಡ್‌ ಕೇರ್‌ ಕೇಂದ್ರಗಳನ್ನುಅಗತ್ಯವಿರುವೆಡೆ ಆರಂಭಿಸಲಾಗಿದೆ. ಪ್ರಸ್ತುತ ಶ್ರೀನಿವಾಪುರ ಪಟ್ಟಣದಸರ್ಕಾರಿ ಆಸ್ಪತ್ರೆಯಲ್ಲಿನ 30 ಬೆಡ್‌ ಭರ್ತಿಯಾಗಿವೆ. ಎಲ್ಲರಿಗೂಆಕ್ಸಿಜನ್‌ ಪೂರೈಕೆ ಮಾಡಲಾಗಿದೆ. ನಾಲ್ಕು ವೆಂಟಿಲೇಟರ್‌ಗಳು ಕೆಲಸನಿರ್ವಹಿಸುತ್ತಿದೆ ಎಂದು ಹೇಳಿದರು.

ಕೊರೊನಾ ನಿಯಂತ್ರಣ ವಿಚಾರ ಜನತೆಗೆ ಏನು ಸಲಹೆ ನೀಡುತ್ತೀರಿ?

ಶ್ರೀನಿವಾಸಪುರ ಕ್ಷೇತ್ರ ಸೇರಿದಂತೆ ಕೋಲಾರ ಜಿಲ್ಲೆಯಲ್ಲಿ ಸಾರ್ವಜನಿಕರು ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಲು ಸ್ವಯಂಪ್ರೇರಿತರಾಗಿ ಮುಂದಾಗುತ್ತಿಲ್ಲ. ಸೋಂಕಿನ ಲಕ್ಷಣಗಳು ಕಂಡುಬರುವ ಪ್ರತಿಯೊಬ್ಬರೂ ಟೆಸ್ಟ್‌ ಮಾಡಿಸಿಕೊಳ್ಳುವುದು ಸೂಕ್ತ. ಒಂದುದಿನಕ್ಕೆ 2 ಸಾವಿರ ಮಂದಿ ಟೆಸ್ಟ್‌ ಮಾಡಿಸಿಕೊಳ್ಳಬಹುದಾಗಿದೆ. ಕೋವಿಡ್‌ ಟೆಸ್ಟ್‌ ಮಾಡಿದ ನಂತರ 3 ದಿನಕ್ಕೆ ಫಲಿತಾಂಶನೀಡುತ್ತಿರುವುದನ್ನು ಮುಂದಿನ ದಿನಗಳಲ್ಲಿ 24 ತಾಸುಗಳಲ್ಲಿ ನೀಡಲುಅಗತ್ಯ ಕ್ರಮ ಕೈಗೊಳ್ಳಲಾಗುವುದು.

 ಕೇತ್ರದ ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಣ ಕ್ರಮಗಳೇನು?

ಆಶಾ ಕಾರ್ಯಕರ್ತೆಯರ ತಂಡ ರಚಿಸಿ ಎಲ್ಲಾ ಪಂಚಾಯ್ತಿಗಳಲ್ಲಿಪ್ರತಿಯೊಬ್ಬರಿಗೂ ಕೋವಿಡ್‌ ಟೆಸ್ಟ್‌ ಮಾಡಿಸಿ ಚಿಕಿತ್ಸೆ ನೀಡುವ ಮೂಲಕ ಕೊರೊನಾದಿಂದ ಮುಕ್ತಗೊಳಿಸಿ ಆರೋಗ್ಯ ಕರ್ನಾಟಕವನ್ನಾಗಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.ಕೋವಿಡ್‌ ಸೆಂಟರ್‌ ಮಾಡುವ ಮೂಲಕ ಓರ್ವ ವೈದ್ಯ ಹಾಗೂಸಿಬ್ಬಂದಿ ನೇಮಿಸಲಾಗುವುದು, ರೋಗಿಗಳಿಗೆ ಉತ್ತಮಗುಣಮಟ್ಟದ ಆಹಾರ ಪೂರೈಕೆಗೆ ಅವಶ್ಯಕವಾದ ಹಣ್ಣು, ತರಕಾರಿ,ಮೊಟ್ಟೆ ಇತ್ಯಾದಿಗಳಿಗೆ ವ್ಯವಸ್ಥೆ ಮಾಡಲಾಗುವುದು.

ಔಷಧಗಳನ್ನುಬೆಂಗಳೂರಿನ ಮೆಡಿಕಲ್‌ ಕಾಲೇಜಿನಿಂದ ಉಚಿತವಾಗಿ ಪೂರೈಸುವಭರವಸೆ ದೊರೆಕಿದೆ. ಸೋಂಕಿತರಿಗೆ ಟೆಲಿಕಾಸ್ಟ್‌ ಮೂಲಕಸಲಹೆಗಳನ್ನು ನೀಡಿ ಆತ್ಮಸ್ಥೈರ್ಯ ತುಂಬಿ ಆತಂಕವನ್ನು ದೂರಮಾಡಲಾಗುವುದು. ಖಾಸಗಿ ಕಲ್ಯಾಣ ಮಂಟಪ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಅನ್ನುಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ಜಾತಿಧರ್ಮ ಭೇದಭಾವಗಳಿಲ್ಲ. ನಾವು ಇದನ್ನು ಯಾವುದೇ ರೀತಿರಾಜಕೀಯಕ್ಕಾಗಿ ಮಾಡುತ್ತಿಲ್ಲ. ಜನಪ್ರತಿನಿಧಿಯಾಗಿ ನನ್ನಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ.

ನಾಗರಾಜು ಕೆ.ವಿ.

Advertisement

Udayavani is now on Telegram. Click here to join our channel and stay updated with the latest news.

Next