Advertisement

ಮಾಸ್ಕ್ ಧಾರಣೆ ಮರೆತರೆ ಜೇಬಿಗೆ ಬೀಳುತ್ತೆ ಕತ್ತರಿ

07:14 PM Apr 21, 2021 | Team Udayavani |

ಗದಗ: ಜಿಲ್ಲೆಯಲ್ಲಿ ಕೋವಿಡ್‌-19ರ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸ್ಥಳೀಯ ಆಡಳಿತ ಮಂಗಳವಾರ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿ ಸುವವರಿಗೆ ದಂಡ ವಿ ಧಿಸುವ ಮೂಲಕ ಬಿಸಿ ಮುಟ್ಟಿಸಿತು.

Advertisement

ಗದಗ ವಿಭಾಗೀಯ ಅಧಿ ಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾರ್‌ ಶ್ರೀನಿವಾಸ ಮೂರ್ತಿ ಕುಲ್ಕರ್ಣಿ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ್‌ ಜಾದವ್‌ ಹಾಗೂ ಶಹರ ಠಾಣೆ ವೃತ್ತ ನಿರೀಕ್ಷಕ ಪಿ.ವಿ.ಸಾಲಿಮಠ ನೇತೃತ್ವದಲ್ಲಿ ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಕಾರ್ಯಾಚರಣೆಗೆ ಇಳಿದರು. ನಗರಸಭೆ ಮತ್ತು ಪೊಲೀಸ್‌ ಸಿಬ್ಬಂದಿ ಇಲ್ಲಿನ ಮಹಾತ್ಮಗಾಂಧಿ  ವೃತ್ತದಲ್ಲಿ ಮಾಸ್ಕ್ ಧರಿಸದೇ ಸಂಚರಿಸುವ ಬೈಕ್‌ ಸವಾರರು, ಪಾದಚಾರಿಗಳು ಹಾಗೂ ಕೆಲ ಆಟೋ ಪ್ರಯಾಣಿಕರಿಗೆ ತಲಾ 100 ರೂ. ದಂಡ ವಿಧಿ ಸಿದರು.

ಇದಕ್ಕೂ ಮುನ್ನ ಹಳೇ ಬಸ್‌ ನಿಲ್ದಾಣ ಸುತ್ತಮುತ್ತಲಿನ ಪ್ರದೇಶ, ಬ್ಯಾಂಕ್‌ ರೋಡ್‌, ಟಾಂಗಾಕೂಟ, ಸ್ಟೇಷನ್‌ ರೋಡ್‌, ಮಹೇಂದ್ರಕರ್‌ ಸರ್ಕಲ್‌, ರಸ್ತೆಯಲ್ಲಿ ಸಾರ್ವಜನಿಕರು ಮತ್ತು ಮಾರುಕಟ್ಟೆಯಲ್ಲಿ ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಕೋವಿಡ್‌ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿ  ಸಲಾಗುತ್ತದೆ ಎಂದು ವರ್ತಕರು ಮತ್ತು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು. ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಪ್ರತಿನಿತ್ಯ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ಸಂಖ್ಯೆ ಅರ್ಧ ಶತಕ ದಾಟುತ್ತಿದೆ. ಸೋಂಕಿತರಲ್ಲಿ ಹೆಚ್ಚಿನವರು ಗದಗ-ಬೆಟಗೇರಿ ಅವಳಿ ನಗರಕ್ಕೆ ಸೇರಿದವರಾಗಿದ್ದು, ಅವಳಿ ನಗರದಲ್ಲಿ ಸೋಂಕಿನ ಭೀತಿ ಹೆಚ್ಚಿದೆ. ಕೋವಿಡ್‌ ನಿಯಂತ್ರಣಕ್ಕೆ ಮುಖಕ್ಕೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕೆಂದು ಸಿಪಿಐ ಪಿ.ವಿ.ಸಾಲಿಮಠ ಮನವಿ ಮಾಡಿದರು.

ಮಾರ್ಗ ಬದಲಿಸಿದ ಸವಾರರು: ಹೆಲ್ಮೆಟ್‌ ಹಾಗೂ ಮಾಸ್ಕ್ ಇಲ್ಲದವರಿಗೆ ಪೊಲೀಸರು ದಂಡ ವಿ ಧಿಸುತ್ತಿದ್ದಾರೆ ಎಂಬುದನ್ನು ಅರಿತ ಕೆಲವರು ಸಮೀಪದಲ್ಲೇ ಮಾರ್ಗ ಬದಲಿಸಿದರು. ಇನ್ನೂ ಕೆಲವರು ಸಮೀಪಕ್ಕೆ ಬರುತ್ತಿದ್ದಂತೆ ಮಾಸ್ಕ್ ಧರಿಸಿ, ಕ್ಷಮೆ ಕೋರಿ ಮುಂದಕ್ಕೆ ಸಾಗುವ ದೃಶ್ಯ ಸಾಮಾನ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next