Advertisement

ರಾಜ್ಯದಲ್ಲಿ 5,339 ಹೊಸ ಪ್ರಕರಣ ಪತ್ತೆ, 48ಮಂದಿ ಸಾವು: ಪಾಸಿಟಿವ್‌ ದರ ಶೇ.4.14ಕ್ಕೆ ಇಳಿಕೆ

09:34 PM Feb 09, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬುಧವಾರ 5,339 ಹೊಸ ಪ್ರಕರಣ ದಾಖಲಾಗಿದ್ದು, 16749 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿತರ ಪಾಸಿಟಿವಿಟಿ ದರ ಶೇ.4.14ಕ್ಕೆ ಹಾಗೂ ಸಕ್ರಿಯ ಪ್ರಕರಣ 60,956ಕ್ಕೆ ಇಳಿಕೆಯಾಗಿದೆ.

Advertisement

24ಗಂಟೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅನಾರೋಗ್ಯದಿಂದ ಬಳಲುತ್ತಿದ್ದ 48ಮಂದಿ ಮೃತಪಟ್ಟಿದ್ದಾರೆ. ಬುಧವಾರ 1.28 ಲಕ್ಷ ಸ್ವಾéಬ್‌ಗಳನ್ನು ಪರೀಕ್ಷೆ ಒಳಪಡಿಸಲಾಗಿತ್ತು. ಬೆೆಂಗಳೂರು ನಗರ 2161, ತುಮಕೂರು 342,ಬೆಳಗಾವಿ 327, ಮೈಸೂರು 293,ಶಿವಮೊಗ್ಗ 185, ಬಳ್ಳಾರಿ 173, ಹಾಸನ 139, ಧಾರವಾಡ 132, ಮಂಡ್ಯ 158,ಚಿತ್ರದುರ್ಗ 136, ಕೊಡಗು 119, ಕಲಬುರಗಿ 111, ಚಾಮರಾಜನಗರ 111, ವಿಜಯಪುರ 103, ದಕ್ಷಿಣ ಕನ್ನಡ 103,ಉಡುಪಿ 97, ರಾಯಚೂರು 75 ,ಚಿಕ್ಕಬಳ್ಳಾಪುರ 70, ಬೆಂಗಳೂರು ಗ್ರಾಮಾಂತರ 69, ಬಾಗಲಕೋಟೆ 67,ಉತ್ತರ ಕನ್ನಡ 60, ಹಾವೇರಿ 55,ಚಿಕ್ಕಮಗಳೂರು 53, ಕೋಲಾರ 50, ರಾಮನಗರ 32, ಗ‌ದಗ 31, ಬೀದರ್‌ 28, ದಾವಣಗೆರೆ 28, ಕೊಪ್ಪಳ 25, ಯಾದಗಿರಿ ಜಿಲ್ಲೆಯಲ್ಲಿ 6 ಮಂದಿಯಲ್ಲಿ ಸೋಂಕು ದೃಢಗೊಂಡಿದೆ.

ಬೆಂಗಳೂರು 16, ದ.ಕ. 5, ಬಳ್ಳಾರಿ 4, ಚಿತ್ರದುರ್ಗ 3, ಧಾರವಾಡ, ಕೋಲಾರ, ಮೈಸೂರು, ಮಂಡ್ಯ, ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 2, ರಾಮನಗರ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಗದಗ, ಹಾವೇರಿ ಜಿಲ್ಲೆಯಲ್ಲಿ ತಲಾ ಒಂದರಂತೆ ಒಟ್ಟು 48ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ : ಡಿಕೆಶಿ ಹೇಳಿಕೆ ಟೂಲ್‌ಕಿಟ್‌ ಪ್ರಕರಣದ ಮುಂದುವರಿದ ಭಾಗ: ನಳಿನ್ ಕುಮಾರ್‌ ಕಟೀಲ್‌

Advertisement

Udayavani is now on Telegram. Click here to join our channel and stay updated with the latest news.

Next