Advertisement

ಬೀದರ್: ಒಂದೇ ದಿನ ಶತಕ ಬಾರಿಸಿದ ಕೋವಿಡ್: ಸೋಂಕಿಗೆ ಮೂವರು ಬಲಿ, 107ಕ್ಕೇರಿದ ಮೃತರ ಸಂಖ್ಯೆ

09:03 PM Aug 15, 2020 | Mithun PG |

ಬೀದರ್: ಗಡಿನಾಡು ಬೀದರ್ ಗೆ ಬೆಂಬಿಡದೇ ಕಾಡುತ್ತಿರುವ ಹೆಮ್ಮಾರಿ ಕೋವಿಡ್  ಸೋಂಕು ಶನಿವಾರ ಮತ್ತೆ ಮೂವರನ್ನು ಬಲಿ ಪಡೆದಿದ್ದು, 113 ಹೊಸಬರಿಗೆ ಸೋಂಕುಒಕ್ಕರಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 107ಕ್ಕೆ ಮತ್ತು ಸೋಂಕಿತರ ಸಂಖ್ಯೆ 3458ಕ್ಕೆ ಏರಿಕೆ ಆಗಿದೆ.

Advertisement

ತೀವ್ರ ಉಸಿರಾಟ ಮತ್ತು ಜ್ವರದ ಲಕ್ಷಣಗಳನ್ನು ಹೊಂದಿದ್ದ ಬೀದರ್ ನ ಶಿವನಗರ ಬಡಾವಣೆಯ 62 ವರ್ಷದ ವ್ಯಕ್ತಿ, ಔರಾದ ತಾಲೂಕಿನ ಏಕಂಬಾ ಗ್ರಾಮದ 60 ವರ್ಷದ ವ್ಯಕ್ತಿ ಹಾಗೂ ಬಸವಕಲ್ಯಾಣ ತಾಲೂಕಿನ ಖೇರಡಾ ಗ್ರಾಮದ 70 ವರ್ಷದ ವೃದ್ಧೆ ಬ್ರಿಮ್ಸ್‌ಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೂವರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು.

ಶನಿವಾರ ಹೊಸದಾಗಿ ಪತ್ತೆಯಾಗಿರುವ 113 ಪ್ರಕರಣಗಳಲ್ಲಿ ಹುಮನಾಬಾದ- ಚಿಟಗುಪ್ಪ ತಾಲೂಕಿನ 26, ಔರಾದ- ಕಮಲನಗರ ತಾಲೂಕಿನ 25, ಭಾಲ್ಕಿ ತಾಲೂಕಿನ 24, ಬೀದರ್ ನಗರ- ತಾಲೂಕಿನ 23 ಹಾಗೂ ಬಸವಕಲ್ಯಾಣ- ಹುಲಸೂರು ತಾಲೂಕಿನ 15 ಕೇಸ್‌ಗಳು ಸೇರಿವೆ.

ಜಿಲ್ಲೆಯಲ್ಲಿ ಈವರೆಗೆ 3458 ಪಾಸಿಟಿವ್ ಪ್ರಕರಣಗಳು ವರದಿ ಆದಂತಾಗಿದೆ. ಒಂದೇ ದಿನ 7೦ ಜನ ಸೇರಿ ಇದುವರೆಗೆ ಒಟ್ಟು 2434 ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಸದ್ಯಕ್ಕೆ ಜಿಲ್ಲೆಯಲ್ಲಿ 913 ಸಕ್ರೀಯ ಕೇಸುಗಳಿವೆ. ಈವರೆಗೆ ಜಿಲ್ಲೆಯ 56,771 ಜನರ ಗಂಟಲು ಮಾದರಿ ತಪಾಸಣೆ ನಡೆಸಲಾಗಿದ್ದು, ಈ ಪೈಕಿ 52,೫549 ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನೂ 764 ಜನರ ವರದಿ ಬರುವುದು ಬಾಕಿದೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next