Advertisement

ಹಸಿರು ವಲಯದಲ್ಲಿದ್ದ ರಾಯಚೂರಿಗೆ ಈಗ ಕೋವಿಡ್-19 ಆತಂಕ

11:42 AM May 12, 2020 | keerthan |

ರಾಯಚೂರು: ಇಷ್ಟ ದಿನ ಕೋವಿಡ್-19 ಪಾಸಿಟಿವ್ ಪ್ರಕರಣಗಳಿಲ್ಲದೆ ಹಸಿರು ವಲಯದಲ್ಲಿದ್ದ ರಾಯಚೂರಿಗೆ ಕೊನೆಗೂ ಆತಂಕ ಎದುರಾಗಿದೆ.

Advertisement

ಬಳ್ಳಾರಿ ಜಿಲ್ಲೆಯ ಕಂಪ್ಲಿಯ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಆದರೆ, ಈ ವ್ಯಕ್ತಿ ಮೇ 5ರಂದು ಸಾರಿಗೆ ಬಸ್ ಮೂಲಕ ಬೆಂಗಳೂರಿನಿಂದ ಗಂಗಾವತಿವರಗೆ ಪ್ರಯಾಣಿಸಿದ್ದು, ಅದೇ ಬಸ್ ನಲ್ಲಿ  ಜಿಲ್ಲೆಯ ಮೂವರು ಪ್ರಯಾಣಿಸಿದ್ದಾರೆ. ಸಿಂಧನೂರಿನ ಸುಕ್ಕಾಲಪೇಟೆ, ರಾಗಲಪರ್ವಿ, ಬಳಗಾನೂರು ಮೂಲದ ವ್ಯಕ್ತಿಗಳು ಆತನೊಟ್ಟಿಗೆ ಪ್ರಯಾಣಿಸಿದ್ದಾರೆ. ಜತೆಗೆ ಇದೇ ಬಸ್ ನಲ್ಲಿ ಕೊಪ್ಪಳ ಜಿಲ್ಲೆಯ ತಾವರಗೆರೆ ಮೂಲದ ವ್ಯಕ್ತಿ ಜಿಲ್ಲೆಯ ಹಾರಪುರದಲ್ಲಿ ಓಡಾಡಿದ್ದಾನೆ.

ಇದು ಕೋವಿಡ್-19 ಸೋಂಕು ಹರಡುವ ಭೀತಿ ಹೆಚ್ಚಿಸಿದೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಮೂವರನ್ನು ಐಸೋಲೋಷನ್ ವಾರ್ಡ್ ಗೆ ದಾಖಲಿಸಿದ್ದಾರೆ. ಕುಟುಂಬ ಸದಸ್ಯರನ್ನು ಕೂಡ ಕ್ವಾರೇಂಟೈನ್ ಗೆ ಒಳಪಡಿಸಲಾಗಿದೆ. ಇನ್ನು ಆ ಮೂವರು ಮೇ 5 ರಿಂದ ಈವರೆಗೆ ಎಲ್ಲೆಲ್ಲಿ ಓಡಾಡಿದ್ದಾರೆ. ಯಾರ ಸಂಪರ್ಕಕ್ಕೆ ಸಿಲುಕಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗಿದೆ

 

Advertisement

Udayavani is now on Telegram. Click here to join our channel and stay updated with the latest news.

Next