Advertisement

ದೇಶದ ಜಿಲ್ಲೆಗಳು ಹೇಳುತ್ತಿರುವ ಕೋವಿಡ್ ಕಥನ

03:20 AM May 21, 2020 | Hari Prasad |

ಭಾರತದಲ್ಲಿನ ಕೋವಿಡ್ ಪ್ರಕರಣಗಳ ಬಗ್ಗೆ ಮಾತನಾಡುವಾಗೆಲ್ಲ ರಾಷ್ಟ್ರೀಯ ಅಥವಾ ರಾಜ್ಯಗಳ ಸ್ತರದಲ್ಲಿ ಅಂಕಿಸಂಖ್ಯೆಗಳನ್ನು ಅವಲೋಕಿಸಲಾಗುತ್ತದೆ.

Advertisement

ಆದರೆ, ನಿಜಕ್ಕೂ ಕೋವಿಡ್ ಹಾವಳಿ ಎಷ್ಟಿದೆ ಎನ್ನುವುದನ್ನು ಅರಿಯಲು ನಿರ್ದಿಷ್ಟ ಜಿಲ್ಲೆಗಳತ್ತ ಗಮನಹರಿಸಿದಾಗ ಅರಿವಾಗುತ್ತದೆ.

ಇಂದು ದೇಶದಲ್ಲಿನ ಅರ್ಧದಷ್ಟು ಸೋಂಕು ಹಾಗೂ ಮರಣ ಪ್ರಮಾಣವು ಕೇವಲ 5 ಜಿಲ್ಲೆಗಳಲ್ಲಿ ದಾಖಲಾಗಿದೆ. ಈಗಾಗಲೇ ಹಲವು ಜಿಲ್ಲೆಗಳು ಸಂಪೂರ್ಣವಾಗಿ ಚೇತರಿಸಿಕೊಂಡರೆ, ಹಲವು ಅಪಾಯದತ್ತ ಮಗ್ಗಲು ಬದಲಿಸುತ್ತಿವೆ…

ರಾಜ್ಯದಲ್ಲಿ ಹೇಗಿದೆ ಸ್ಥಿತಿ?
ಮೇ 13ರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಏರುತ್ತಿದೆ. ಅದರಲ್ಲೂ ಮುಖ್ಯವಾಗಿ ಅನ್ಯ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರಿಂದಾಗಿ ಈಗ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಹಠಾತ್ತನೆ ಏರಿಕೆಯಾಗಿಬಿಟ್ಟಿದೆ.

ಇದರ ನಡುವೆಯೇ ಗಮನಿಸಬೇಕಾದ ಸಂಗತಿಯೆಂದರೆ, ರಾಜ್ಯದಲ್ಲಿ ಚೇತರಿಕೆಯ ಪ್ರಮಾಣವೂ ಉತ್ತಮವಾಗಿದ್ದು, 38 ಪ್ರತಿಶತ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ. ಆದರೆ, ರೋಗ ಬೆಳವಣಿಗೆ ದರವು 6 ಪ್ರತಿಶತದಷ್ಟಿರುವುದು ಕಳವಳಕಾರಿ ಸಂಗತಿ.

Advertisement

ಸಕ್ರಿಯ ಪ್ರಕರಣಗಳಲ್ಲಿ ಮಂಡ್ಯ ಮೊದಲು!
ಮಂಡ್ಯವೀಗ ರಾಜ್ಯದಲ್ಲಿ ಅತಿಹೆಚ್ಚು ಕೋವಿಡ್ ಸೋಂಕಿತರನ್ನು ಹೊಂದಿರುವ ಜಿಲ್ಲೆಯಾಗಿ ಬದಲಾಗಿದೆ. ಅನ್ಯರಾಜ್ಯಗಳಿಂದ ಕಾರ್ಮಿಕರನ್ನು ಕರೆತರಲು ಸರಕಾರ ಅನುಮತಿಸಿದ ನಂತರ ಮಂಡ್ಯಕ್ಕೆ ಬಂದ ಅನೇಕರಲ್ಲಿ ಸೋಂಕು ದೃಢಪಟ್ಟಿದೆ.

ಬುಧವಾರದ ವೇಳೆಗೆ ಬೆಂ.ನಗರದಲ್ಲಿ (ಜಿಲ್ಲೆ) ಸೋಂಕಿತರ ಸಂಖ್ಯೆ 117 ಇತ್ತು, ಮಂಡ್ಯದಲ್ಲಿ 147ಕ್ಕೆ ಏರಿಕೆಯಾಯಿತು. ಈ ಸಂಖ್ಯೆ ನಿಯಂತ್ರಣಕ್ಕೆ ಬರುವುದೇ ಅಥವಾ ಏರುವುದೇ ಎಂಬ ಆತಂಕ ಈಗ ಎದುರಾಗಿದೆ.





Advertisement

Udayavani is now on Telegram. Click here to join our channel and stay updated with the latest news.

Next