Advertisement

ಗಂಗಾವತಿ: ಕೋವಿಡ್-19 ಸೋಂಕು ಪೀಡಿತ ನರ್ಸ್ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

05:10 PM Jun 22, 2020 | keerthan |

ಗಂಗಾವತಿ: ಕೋವಿಡ್-19 ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇಲ್ಲಿಯ ಸರಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಸೋಂಕಿನಿಂದ ಗುಣಮುಖರಾಗಿ ಸೋಮವಾರ ಬಿಡುಗಡೆಯಾಗಿ ‌ಮನೆಗೆ ತೆರಳಿದರು.

Advertisement

ಕೋವಿಡ್ ಸೋಂಕಿನಿಂದ ಗುಣಮುಖರಾದ ಸ್ಟಾಪ್ ನರ್ಸ್ ಇವರಿಗೆ ಶಾಸಕ ಪರಣ್ಣ ಮುನವಳ್ಳಿ ಹಾಗೂ ಸರಕಾರಿ ಆಸ್ಪತ್ರೆಯ ವೈದ್ಯರು ಸಿಬ್ಬಂದಿ ವರ್ಗದವರು ಹೂಗುಚ್ಛ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಕೋವಿಡ್ ರೋಗ ಕಾಣಿಸಿಕೊಂಡಿದ್ದ ನರ್ಸ್ ಗುಣಮುಖರಾಗಿದ್ದಾರೆ. ಅವರ 8 ತಿಂಗಳ ಮಗುವಿನ ಗಂಟಲು ದ್ರವ ಪಡೆದು ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ಬಂದಿದೆ. ತಾಯಿ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದರು.

ಭೌತಿಕ ಅಂತರ, ಸ್ಯಾನಿಟೈಜರ್ ಬಳಕೆ ಮತ್ತು ಜಾಗೃತಿಯಿಂದ ಇದ್ದರೆ ಕೋವಿಡ್-19 ರೋಗದಿಂದ ದೂರ ಇರಲು ಸಾಧ್ಯ. ಜನರು ಭಯಪಡಬಾರದು ಜಾಗೃತಿಯಿಂದ ಜೀವನ‌ ನಡೆಸಬೇಕೆಂದರು.

ಡಾ.ಲಿಂಗರಾಜು, ಡಾ.ಸವಡಿ, ಡಾ.ಗೌರಿಶಂಕರ, ಡಾ.ಮಲ್ಲಿಕಾರ್ಜುನ ಸೇರಿ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಉಪಸ್ಥಿತಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next