Advertisement

ಭಟ್ಕಳದ ಸೋಂಕು ಭೀತಿ: ಉಡುಪಿ ಗಡಿಯಲ್ಲಿ ಕಟ್ಟೆಚ್ಚರ

12:00 PM May 09, 2020 | sudhir |

ಉಡುಪಿ: ಭಟ್ಕಳದಲ್ಲಿ ಶುಕ್ರವಾರ 12 ಸೋಂಕು ದೃಢಪಟ್ಟ ಕಾರಣ ಉಡುಪಿ ಜಿಲ್ಲೆಯ ಶಿರೂರು ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಬೈಂದೂರಿನ 20 ಪೊಲೀಸರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒನ್‌ ಟೈಮ್‌ ಪಾಸ್‌ ಇದ್ದವರು ಮತ್ತು ಮಣಿಪಾಲ ಆಸ್ಪತ್ರೆಗೆ ವೈದ್ಯಕೀಯ ಚಿಕಿತ್ಸೆಗಾಗಿ ಬರುವವರಿಗೆ ಮಾತ್ರ ಉಡುಪಿ ಜಿಲ್ಲೆಯೊಳಗೆ ಬರಲು ಬಿಡಲಾಗುತ್ತಿದೆ.

Advertisement

ಎಲ್ಲ ವರದಿ ನೆಗೆಟಿವ್‌
ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 57 ಜನರ ಮಾದರಿ ಗಳನ್ನು ಸಂಗ್ರಹಿಸಿದ್ದರೆ ಅದರಲ್ಲಿ 45 ಮಂದಿ ಹಾಟ್‌ಸ್ಪಾಟ್‌ ಸಂಪರ್ಕದವರಾಗಿದ್ದಾರೆ. ಇವರಲ್ಲದೆ ತೀವ್ರ ಉಸಿರಾಟದ ಸಮಸ್ಯೆಯ ಐವರು, ಫ್ಲೂ ಜ್ವರದ ಏಳು ಮಂದಿ ಇದ್ದಾರೆ. ಶುಕ್ರವಾರ ಬಂದ ಎಲ್ಲ 25 ಮಾದರಿ ಪರೀಕ್ಷೆಗಳೂ ನೆಗೆಟಿವ್‌ ಆಗಿದೆ.

60 ಮಂದಿ ಹೆಸರು ನೋಂದಾಯಿಸಿದ್ದು, 68 ಮಂದಿ 28 ದಿನಗಳ, 35 ಮಂದಿ 14 ದಿನಗಳ ಕ್ವಾರಂಟೈನ್‌ ಮುಗಿಸಿದ್ದಾರೆ. 716 ಜನರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

4,000 ಜನರ ಆಗಮನ
ಗುರುವಾರ 900 ಜನರು ಉಡುಪಿ ಜಿಲ್ಲೆಗೆ ಆಗಮಿಸಿದ್ದು ನಾಲ್ಕು ದಿನಗಳಿಂದ ಸುಮಾರು 4,000 ಜನರು ಆಗಮಿಸಿದ್ದಾರೆ. ಇವರೆಲ್ಲರನ್ನೂ ಪರೀಕ್ಷಿಸಿ ಸೀಲು ಹಾಕಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ ಎಂದು ಡಿಎಚ್‌ಒ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next