Advertisement

ಕಲ್ಲಂಗಡಿ ಬೆಳೆದ ರೈತನಿಗೆ ಲಕ್ಷಾಂತರ ನಷ್ಟ

06:37 PM Apr 03, 2020 | Suhan S |

ಮರಿಯಮ್ಮನಹಳ್ಳಿ:  ಕೋವಿಡ್ 19 ಕರಿನೆರಳು ಸಣ್ಣರೈತರಿಂದ ಹಿಡಿದು ದೊಡ್ಡ ಹಿಡುವಳಿದಾರರಿಗೂ ಸಂಕಷ್ಟಕ್ಕೆ ದೂಡಿದೆ. ತೋಟಗಾರಿಕೆ ಬೆಳೆಗಾರರೂ ಹಣ್ಣು ಬೆಳೆಗಾರರು ಲಕ್ಷಾಂತರ ರೂಪಾಯಿಗಳ ನಷ್ಟ ಅನುಭವಿಸುತ್ತಿದ್ದಾರೆ.

Advertisement

ಮರಿಯಮ್ಮನಹಳ್ಳಿ ಹೋಬಳಿಯ ನಂದಿಬಂಡಿ ಗ್ರಾಮದ ಬಳಿಯಿರುವ ಚಿದ್ರಿ ಸತೀಶ್‌ ಅವರ ತೋಟದಲ್ಲಿ ಸುಮಾರು 6 ಎಕರೆ ಜಮೀನಿನಲ್ಲಿ ಬೆಳೆದ ಶುಗರ್‌ ಕ್ವೀನ್‌ ತಳಿಯ ಕಲ್ಲಂಗಡಿ ಬೆಳೆ ಕಟಾವಿಗೆ ಬಂದಿದ್ದು ದೇಶವೇ ಲಾಕ್‌ಡೌನ್‌ ಆಗಿರುವುದರಿಂದ ಕಲ್ಲಂಗಡಿ ಬೆಳೆಯನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಇದರಿಂದ ಹತಾಶರಾದ ರೈತ ಚಿದ್ರಿ ಸತೀಶ್‌ ಅವರು ಕ್ಲಲಂಗಡಿಯನ್ನು ಹೊಲದಲ್ಲಿಯೇ ಹಾಳಾಗಲು ಬಿಡದೆ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜನರಿಗೆ ಮನೆಮನೆಗೆ ಉಚಿತವಾಗಿ ಹಂಚಲು ಮುಂದಾಗಿದ್ದಾರೆ. ಆರು ಎಕರೆಗೆ 18ರಿಂದ 20 ಲಕ್ಷ ರೂಪಾಯಿಗಳ ಆದಾಯ ಸಿಗುತ್ತಿತ್ತು ಆದರೆ ವೈರಸ್‌ ಈ ರೈತರ ಪಾಲಿಗೆ ಕಂಕಟಕವಾಗಿ ಪರಿಣಮಿಸಿ ಸುಮಾರು 20 ಲಕ್ಷ ರೂಪಾಯಿಗಳ ನಷ್ಟ ಎದುರಿಸುವಂತಾಗಿದೆ ಎಂದು ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಬೆಳೆಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದರೂ ಖರೀದಿದಾರರು ಮುಂದೆ ಬರುತ್ತಿಲ್ಲ. ಇನ್ನೂ ಹೆಚ್ಚುದಿನಗಳ ಕಾಲ ಕಾಯಲು ಆಗುವುದಿಲ್ಲ. ಹಾಗೆ ಬಿಟ್ಟರೆ ಬೆಳೆಯೆಲ್ಲಾ ಕೆಟ್ಟು ಹೋಗುತ್ತೆ. ಹಾಗೆ ಕೆಡಲು ಬಿಡದೆ ನಮ್ಮೂರಿನ ಹಾಗೂ ಸುತ್ತಮುತ್ತಲ ಗ್ರಾಮಗಳ ನಮ್ಮ ಜನರು ಈಹಣ್ಣನ್ನು ಸವಿಯಲು ನಾವೇ ಉಚಿತವಾಗಿ ಹಂಚುತ್ತಿದ್ದೇವೆ. ಚಿದ್ರಿ ಸತೀಶ್‌, ರೈತ

 

-ಎಂ. ಸೋಮೇಶ ಉಪ್ಪಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next