Advertisement

ಯುಗಾದಿ ಸಂಭ್ರಮಕ್ಕೆ ಕೋವಿಡ್ 19 ಅಡ್ಡಿ

03:33 PM Mar 27, 2020 | Suhan S |

ತುಮಕೂರು: ಕೋವಿಡ್ 19 ಭೀತಿಗೆ ದೇಶ ಲಾಕ್‌ಡೌನ್‌ ಆಗಿದ್ದರೂ ಗುರುವಾರ ಕಲ್ಪತರು ನಾಡಿನ ಜನರು ಯುಗಾದಿಯ ಹೊಸತಡಕಿಗೆ ಮಾಂಸ, ಮೀನು ಕೊಳ್ಳಲು ಮಟನ್‌ ಸ್ಟಾಲ್‌ ಮುಂದೆ ಸಾಲು ಕಟ್ಟಿ ನಿಂತಿದ್ದರು.

Advertisement

ಯುಗಾದಿ ಮೊದಲ ದಿನ ಸಿಹಿ ಊಟ ಮಾಡಿ ಮಾರನೇ ದಿನ ಕಾರದ ಊಟ ಮಾಡುವುದು ರೂಢಿ. ಆದರೆ ಈ ಬಾರಿ ಹಬ್ಬದ ಸೊಬಗನ್ನು ಕೊರೊನಾ ಹಾಳು ಮಾಡಿದೆ. ಬಂದ್‌ ವಾತಾವರಣದಿಂದ ಹಬ್ಬದ ಸಂಭ್ರಮ ಮಾಯವಾಗಿದೆ. ಈ ನಡುವೆಯೂ ಜನರು ವರ್ಷ ತಡಕಿಗೆ ಜಿಲ್ಲೆಯಲ್ಲಿ ಮಾಂಸಾಹಾರ ಸೇವಿಸುವವರು ಮಟನ್‌ ಸ್ಟಾಲ್‌ ಮುಂದೆ ಸಾಲುಗಟ್ಟಿ ನಿಂತಿದ್ದರು. ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಅಕೋಳಿ ಅಂಗಡಿಗಳು ಬಂದ್‌ ಆಗಿರುವುದರಿಂದ ಮಟನ್‌ ಮತ್ತು ಮೀನು ಖರೀದಿಗೆ ಮುಗಿ ಬಿದ್ದರು. ಮಟನ್‌ ಬೆಲೆ 700 ರೂ. ಇದ್ದರೂ ಜನ ತಲೆ ಕೆಡಿಸಿಕೊಂಡಿರಲಿಲ್ಲ. ಅಂತರ ಕಾಪಾಡಿಕೊಂಡು ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿತ್ತು.

ವಾಹನ ಸಂಚಾರ: ಲಾಕ್‌ ಡೌನ್‌ ಆದೇಶ ಪಾಲಿಸದೇ ಜನರು ವಾಹನಗಳಲ್ಲಿ ಸಂಚರಿಸುತ್ತಿದದ್ದು ಕಂಡುಬಂತು. ನಗರದ ರಿಂಗ್‌ ರಸ್ತೆ, ಗುಬ್ಬಿ ಗೇಟ್‌, ಕುಣಿಗಲ್‌ ರಸ್ತೆ, ಬಿ.ಎಚ್‌.ರಸ್ತೆ ಜಾಸ್‌ ಟೋಲ್‌ ಗೇಟ್‌, ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧ ರಸ್ತೆಗಳಲ್ಲಿ ಕಾರು, ಬೈಕ್‌ಗಳ ಸಂಚಾರ ಯಥಾಸ್ಥಿತಿ ಇತ್ತು. ಕೆಲವು ಕಡೆ ಪೊಲೀಸರಿಂದ ಕೆಲವರಿಗೆ ಲಾಠಿ ರುಚಿ ತೋರಿಸಲಾಯಿತು. ನಗರದ ಕ್ಯಾತ್ಸಂದ್ರ ಟೋಲ್‌ನಲ್ಲಿ ಪೊಲೀಸ್‌ ಭದ್ರತೆ ಇದ್ದರೂ ಬೆಂಗಳೂರಿನಿಂದ ಕಾರುಗಳಲ್ಲಿ ಜನ ಬರುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next