Advertisement

“ಕೋವಿಡ್ ಕಾರ್ಯಗಳಿಗಾಗಿ ಗನ್‌ಮ್ಯಾನ್‌ ವಾಪಸ್‌’: ಸಂಸದೆ ಶೋಭಾ ಕರಂದ್ಲಾಜೆ 

05:32 PM May 07, 2020 | Team Udayavani |

ಉಡುಪಿ/ಕುಂದಾಪುರ: ಮೂಲಭೂತವಾದಿಗಳಿಂದ ನಿರಂತರ ವಾಗಿ ಬೆದರಿಕೆ ಕರೆಗಳು ಬರುತ್ತಿದ್ದರೂ ಕೋವಿಡ್ ಕಾರ್ಯಗಳಿಗಾಗಿ ನನ್ನ ಇಬ್ಬರು ಗನ್‌ಮ್ಯಾನ್‌ಗಳನ್ನು ಕೋವಿಡ್ ರಕ್ಷಣಾ ಚಟುವಟಿಕೆ ಗಳಿಗಾಗಿ ಕಳುಹಿಸಿ ಕೊಟ್ಟಿದ್ದೇನೆ. ಓಡಾಟದ ಸಂದರ್ಭ ಕಾರ್ಯಕರ್ತರು ಜತೆಗಿರುತ್ತಾರೆ. ಅವರೇ ನನಗೆ ಶ್ರೀರಕ್ಷೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಅವರು ಬುಧವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪ್ರಧಾನಿಯವರ ಪರವಾಗಿ ಪೋಸ್ಟ್‌ ಹಾಕಿದ ಕೇರಳದ ವ್ಯಕ್ತಿಗೆ ಕುವೈಟ್‌ನಲ್ಲಿ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನನಗೆ ವಿದೇಶದಿಂದ ಬೆದರಿಕೆ ಕರೆಗಳು ಬರುತ್ತಿವೆ. ಬುಧವಾರವೂ ಬಂದಿದೆ. ಈ ಬಗ್ಗೆ ದೂರು ನೀಡಲಾಗಿದೆ ಎಂದರು. ಜಿಲ್ಲಾಡಳಿತ ನಮ್ಮ ಜತೆ ನಿರಂತರವಾಗಿ ಚರ್ಚೆ ಗಳನ್ನು ಮಾಡಿ ತೆಗೆದುಕೊಂಡ ಘಟ್ಟಿ ನಿರ್ಧಾರಗಳೇ ಇಲ್ಲಿ ಕೇಸುಗಳು ನಿಯಂತ್ರಣದಲ್ಲಿ ಇರಲು ಕಾರಣ ಎಂದರು. ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾದವರಿಗೆ ಸಹಾಯ ಮಾಡಬೇಕು, ಯಾವುದಕ್ಕೆ ತೆರಿಗೆ ವಿಧಿಸಬೇಕು, ಯಾವುದಕ್ಕೆ ಕಡಿಮೆ ಮಾಡಬೇಕು ಎಂಬುದನ್ನು ಸರಕಾರ ನಿರ್ಧಾರ ಮಾಡುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next