Advertisement

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

02:00 AM Jul 27, 2024 | Team Udayavani |

ಹೊಸದಿಲ್ಲಿ: ದೇಶಾದ್ಯಂತ ವಿವಿಧ ನ್ಯಾಯಾಲಯ ಗಳಲ್ಲಿ 5 ಕೋಟಿಗೂ ಅಧಿಕ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿವೆ ಎಂದು ಲೋಕಸಭೆಗೆ ಸರಕಾರವು ಲಿಖೀತ ಮಾಹಿತಿ ನೀಡಿದೆ. ಈ ಪೈಕಿ ಉತ್ತರ ಪ್ರದೇಶವೊಂದ ರಲ್ಲೇ ಬರೋಬ್ಬರಿ 1.18 ಕೋಟಿ ಕೇಸುಗಳು ಇತ್ಯರ್ಥವಾಗಬೇಕಿವೆ ಎಂದೂ ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘಾÌಲ್‌ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ 84,045 ಮತ್ತು ವಿವಿಧ ಹೈಕೋರ್ಟ್‌ ಗಳಲ್ಲಿ 60.11ಲಕ್ಷ ಪ್ರಕರಣಗಳು ಬಾಕಿಯಿದ್ದರೆ, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 4.53 ಕೋಟಿ ಕೇಸುಗಳು ಇತ್ಯರ್ಥವಾಗಬೇಕಿವೆ. ನ್ಯಾಯಲಯಗಳ ಲ್ಲಿನ ಮೂಲಸೌಕರ್ಯ, ಸಿಬಂದಿ ಕೊರತೆ, ಪ್ರಕರಣ ಗಳ ಸಂಕೀರ್ಣತೆ ವಿಚಾರಣೆಗಳ ಮುಂದೂಡುವಿಕೆ ಸೇರಿದಂತೆ ಹಲವು ಕೊರತೆಗಳೇ ಇಷ್ಟೊಂದು ಪ್ರಕರಣ ಬಾಕಿ ಉಳಿಯಲು ಕಾರಣ ಎಂದಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next