Advertisement

ವರದಕ್ಷಿಣೆ ಕೊಲೆ ಕೇಸು : ಅಪ್ಪ, ಮಗನಿಗೆ 10 ವರ್ಷ ಸಶ್ರಮ ಜೈಲು ಶಿಕ್ಷೆ

10:29 AM Jun 12, 2019 | Team Udayavani |

ಗಯಾ : ಗಯಾ ಜಿಲ್ಲೆಯಲ್ಲಿ 2107ರಲ್ಲಿ ನಡೆದಿದ್ದ ವರದಕ್ಷಿಣೆ ಕೊಲೆ ಕೇಸಿಗೆ ಸಂಬಂಧಪಟ್ಟು ಸ್ಥಳೀಯ ನ್ಯಾಯಾಲಯ ಆರೋಪಿಗಳಾದ ತಂದೆ ಮತ್ತು ಮಗನಿಗೆ ಹತ್ತು ವರ್ಷಗಳ ಸಶ್ರಮ ಜೈಲು ಶಿಕ್ಷೆ ವಿಧಿಸಿದೆ.

Advertisement

ವರದಕ್ಷಿಣೆ ಬೇಡಿಕೆ ಪೂರೈಸದ ಕಾರಣಕ್ಕೆ ತಂದೆ ನಾನುಕ್‌ ಪ್ರಜಾಪತ್‌ ಮತ್ತು ಮಗ ನಾಗೇಂದ್ರ ಕುಮಾರ್‌, ರಿಂಕಿ ದೇವಿಯನ್ನು ಕೊಲೆಗೈದಿದ್ದಾರೆ ಎಂಬ ಪ್ರಾಸಿಕ್ಯೂಶನ್‌ ವಾದವನ್ನು ಪುರಸ್ಕರಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಧೀಶ ಕಾಮೇಶ್ವರ್‌ ನಾಥ್‌ ಅವರು ಅಪರಾಧಿಗಳಿಗೆ 10 ವರ್ಷಗಳ ಕಠಿನ ಸಜೆ ವಿಧಿಸಿ ತೀರ್ಪು ನೀಡಿದರು.

ಮಾತ್ರವಲ್ಲದೆ ಅಪರಾಧಿಗಳಿಬ್ಬರಿಗೂ ತಲಾ 5,000 ರೂ. ದಂಡ ವಿಧಿಸಿ, ಇದನ್ನು ಪಾವತಿಸಲು ವಿಫ‌ಲರಾದರೆ ಹೆಚ್ಚುವರಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕೆಂದು ತೀರ್ಪಿನಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next