Advertisement

ಲೋಕ ಅದಾಲತ್‌: ಒಂದಾದ ಜೋಡಿಗಳು!

12:05 PM Feb 12, 2023 | Team Udayavani |

ಹೊಸಪೇಟೆ: ನಗರದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ದೂರಾಗಿದ್ದ ಮೂರು ಜೋಡಿಗಳು ಒಂದಾಗಿವೆ. ಪ್ರಧಾನ ಸಿವಿಲ್‌ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕಾಗಿ ಬಿ.ರವಿಕುಮಾರ ವಿರುದ್ಧ ಮಂಗಳಾ ಹಾಗೂ ಎಲ್‌. ಸುನಿಲ್‌ಕುಮಾರ ವಿರುದ್ಧ ಅಂಬಿಕಾ ಪ್ರಕರಣ ದಾಖಲಿಸಿದ್ದರು.

Advertisement

2ನೇ ಅಪರ ಸಿವಿಲ್‌ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಮುಕ್ತಾಬಾಯಿ ಬಂಗಾಳೆ ವಿರುದ್ಧ ಲಕ್ಷ್ಮೀಕಾಂತ ಹೆಬ್ಟಾರ್‌ ಪ್ರಕರಣ ದಾಖಲಿಸಲಾಗಿತ್ತು.  ಮೂರು ದಂಪತಿಗಳಿಗೆ ತಿಳಿವಳಿಕೆ ನೀಡಿ ರಾಜೀ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಲಾಯಿತು.

ಪ್ರಧಾನ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರು, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಹೇಮಲತಾ.ಬಿ.ಹುಲ್ಲೂರ, ನ್ಯಾಯಾಧೀಶರಾದ ಸಂಜೀವಕುಮಾರ.ಜಿ ಹಾಗೂ ನ್ಯಾಯವಾದಿಗಳಾದ ಕರುಣಾನಿ , ಎಸ್‌.ವಿ, ಕೆಸಿಬಿ, ಬಿವಿಪಿ, ರಂಜೀತ್‌ ಸಿಂಗ್‌, ಹಾಜಿ ರಾಝ಼ಿಯಾ ಜಬೀನ್‌, ಆಡಳಿತ ಸಹಾಯಕ ಎಸ್‌.ಬಿ.ಕಮತರ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next