Advertisement

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ

12:35 AM May 28, 2024 | Team Udayavani |

ಸುಳ್ಯ: ಹಲಸಿನ ಹಣ್ಣು ಕೊಯ್ಯುವಾಗ ವಿದ್ಯುತ್‌ ಶಾಕ್‌ ತಗಲಿ ಕಾರ್ಮಿಕ ದಂಪತಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಸುಳ್ಯ ತಾಲೂಕಿನ ಉಬರಡ್ಕದಲ್ಲಿ ಸಂಭವಿಸಿದೆ.

Advertisement

ಉಬರಡ್ಕ ಸೊಸೈಟಿ ಸಮೀಪದ ಕೃಷಿಕರೋರ್ವರ ತೋಟದಲ್ಲಿ ಕೆಲಸ ನಿರ್ವಹಿಸುವ ಝಾರ್ಖಂಡ್‌ ಮೂಲದ ದಂಪತಿ ರಾಜು ಹಾಗೂ ಸುನಿತಾ ಅವರು ಸೋಮವಾರ ಬೆಳಗ್ಗೆ ಕಬ್ಬಿಣದ ದೋಟಿಯಲ್ಲಿ ಹಲಸಿನ ಹಣ್ಣು ಕೊಯ್ಯುತ್ತಿದ್ದ ವೇಳೆ ದೋಟಿ ವಿದ್ಯುತ್‌ ತಂತಿಗೆ ತಾಗಿ ವಿದ್ಯುತ್‌ ಪ್ರವಹಿಸಿತು. ವಿದ್ಯುದಾಘಾತಾಕ್ಕೊಳಗಾದ ದಂಪತಿಯನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next