Advertisement

ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ: ಕಾಂಗ್ರೆಸ್‌ ಆರೋಪ

10:43 AM Aug 19, 2019 | Team Udayavani |

ಹೊಸದಿಲ್ಲಿ: ದೇಶದಲ್ಲಿ ಆರ್ಥಿಕತೆ ತೀವ್ರ ಕುಸಿತಗೊಂಡಿದ್ದು, ತುರ್ತು ಪರಿಸ್ಥಿತಿ ಉದ್ಭವವಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ.

Advertisement

ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಅವರು, ಆರ್ಥಿಕತೆ ಅಧಃಪತನವಾಗುತ್ತಿರುವುದರಿಂದ, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಸರಕಾರ ನಾಟಕವಾಡುತ್ತಿದೆ ಎಂದು ಟೀಕಿಸಿದರು.

ಅವರು ವಿಶೇಷವಾಗಿ ದೇಶದ ಆಟೋಮೊಬೈಲ್‌ ವಲಯ ತೀವ್ರವಾಗಿ ಕುಸಿತಗೊಂಡಿದ್ದನ್ನು ಪ್ರಸ್ತಾವಿಸಿದರು. 2018 ಜುಲೈನಿಂದ ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ. ಶೇ.31ರಷ್ಟು ಮಾರಾಟ ಕಡಿಮೆಯಾಗಿದ್ದು, ಕಳೆದ 9 ತಿಂಗಳಿಂದ ಮಾರಾಟ ತೀವ್ರ ಇಳಿಕೆ ಕಂಡಿದೆ ಎಂದು ಹೇಳಿದರು. ಇದರೊಂದಿಗೆ ಅವರು ಷೇರು ಮಾರುಕಟ್ಟೆ ಕುಸಿತ, ಜಿಡಿಪಿ ಕುಸಿತ, ರಿಯಲ್‌ ಎಸ್ಟೇಟ್‌, ರೂಪಾಯಿ ಕುಸಿತ, ವಿದೇಶಿ ನೇರ ಬಂಡವಾಳ ಹೂಡಿಕೆ ಕುಸಿತವಾಗಿರುವುದನ್ನು ಬೊಟ್ಟು ಮಾಡಿದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ 1ನೇ ಅವಧಿಯಿಂದ 2ನೇ ಅವಧಿಗೆ ಆರ್ಥಿಕ ಕುಸಿತ ಹೆಚ್ಚು ಪ್ರಗತಿಯಲ್ಲಿದೆ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next