Advertisement

ತುಂಗಾ ಜಲಾಶಯದಿಂದ ನೀರು ಹೊರಬಿಡಲು ಕ್ಷಣಗಣನೆ

09:19 AM Jul 05, 2023 | Team Udayavani |

ಶಿವಮೊಗ್ಗ: ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಅತಿಚಿಕ್ಕ ತುಂಗಾ ಜಲಾಶಯ (ಗಾಜನೂರು) ಗರಿಷ್ಠ ಮಟ್ಟ ತಲುಪಿದ್ದು ಯಾವುದೆ ಕ್ಷಣದಲ್ಲೂ ನೀರು ಹೊರಬಿಡುವ ಸಾಧ್ಯತೆ ಇದೆ.

Advertisement

ಸಮುದ್ರ ಮಟ್ಟದಿಂದ 588.24 ಮೀಟರ್ ಗರಿಷ್ಠ ಮಟ್ಟದ ಜಲಾಶಯದಲ್ಲಿ ಪ್ರಸ್ತುತ 587.54 ಮೀಟರ್ ನಷ್ಟು ನೀರಿದೆ. ಪೂರ್ಣ ಪ್ರಮಾಣದ ಭರ್ತಿಗೆ ಎರಡು ಅಡಿ ಮಾತ್ರ ಬಾಕಿ ಇದ್ದು ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಕ್ಷಣದಲ್ಲೂ ನೀರು ಹೊರ ಬಿಡುವ ಸಾಧ್ಯತೆ ಇದೆ. ಹೊಸಪೇಟೆ ತುಂಗಾಭದ್ರಾ ಜಲಾಶಯ ತುಂಬಲು ತುಂಗಾ ನೀರೇ ಪ್ರಮುಖ ಆಧಾರ.

Advertisement

Udayavani is now on Telegram. Click here to join our channel and stay updated with the latest news.

Next