Advertisement

BRS ಅವನತಿಗೆ ಕ್ಷಣಗಣನೆ ಆರಂಭ : ಶಾ

09:52 PM Apr 23, 2023 | Team Udayavani |

ಹೈದರಾಬಾದ್‌: ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ಅವರ ಬಿಆರ್‌ಎಸ್‌ ಪಕ್ಷದ ಅವನತಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ರಾಜ್ಯದಲ್ಲಿರುವ ಬಿಆರ್‌ಎಸ್‌ ಆಡಳಿತವನ್ನು ಕಿತ್ತೂಗೆಯುವವರೆಗೂ ಬಿಜೆಪಿಯ ಈ ಹೋರಾಟ ನಿಲ್ಲುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಗರ್ಜಿಸಿದ್ದಾರೆ.

Advertisement

ತೆಲಂಗಾಣದ ಚಾವೆಲ್ಲಾದಲ್ಲಿ ನಡೆದ “ವಿಜಯ ಸಂಕಲ್ಪ ಸಭಾ” ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ, ಶಾ ಮಾತನಾಡಿದರು. ಈ ವೇಳೆ, ಕಳೆದ 8-9 ವರ್ಷಗಳಿಂದ ರಾಜ್ಯದಲ್ಲಿ ಬಿಆರ್‌ಎಸ್‌ ಭ್ರಷ್ಟ ಸರ್ಕಾರ ನಡೆಸುತ್ತಿದೆ. ಜನರಿಗಾಗಿ ಮೋದಿ ಸರ್ಕಾರ ರೂಪಿಸಿದ ಯೋಜನೆಗಳು ಜನರನ್ನು ತಲುಪುತ್ತಲೇ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಭ್ರಷ್ಟರನ್ನು ಕಂಬಿ ಹಿಂದೆ ನಿಲ್ಲಿಸುವುದು ಖಚಿತ. ರಾಜ್ಯದಲ್ಲಿ ಮುಸಲ್ಮಾನರಿಗೆ ನೀಡಿರುವ ಮೀಸಲಾತಿಯನ್ನೂ ನಾವು ತೆಗೆದುಹಾಕುತ್ತೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next