Advertisement

ಹತ್ತಿ ಬೆಳೆ ಕ್ರಾಸಿಂಗ್ ವಿಚಾರ: ಗಂಡ ಬೈದಿದಕ್ಕೆ, ಬೇಸತ್ತು ಹೆಂಡತಿ‌ ಆತ್ಮಹತ್ಯೆ

09:29 PM Aug 03, 2022 | Team Udayavani |

ಕುಷ್ಟಗಿ: ಹತ್ತಿ ಬೆಳೆ ಕ್ರಾಸಿಂಗ್ ವಿಚಾರವಾಗಿ ಗಂಡ ಬೈದಿದಕ್ಕೆ, ಬೇಸತ್ತ ಹೆಂಡತಿ‌ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಮದಲ್ಲಿ ‌ನಡೆದಿದೆ.

Advertisement

ನೇತ್ರಾವತಿ ಶೇಖಯ್ಯ ಗುರುವಿನ್ (28) ಮೃತ ದುರ್ದೈವಿ.

ಪತಿ ಶೇಖಯ್ಯ ಗುರುವಿನ ಹತ್ತಿ ಬೆಳೆಯ ಕ್ರಾಸಿಂಗ್ ವಿಚಾರಕ್ಕೆ ಬೈದಿದ್ದರು. ಇದರಿಂದಾಗಿ ನೇತ್ರಾವತಿ ಮನನೊಂದು ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದಳು.

ಇದನ್ನೂ ಓದಿ: ಬ್ಯಾಂಕ್ ವಂಚನೆ ಪ್ರಕರಣ: ಇ.ಡಿ.ಯಿಂದ 415 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಕೂಡಲೇ ಕುಷ್ಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನೇತ್ರಾವತಿ ಮೃತಪಟ್ಟದ್ದಾರೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next