Advertisement

Pm Modi: ಭ್ರಷ್ಟಾಚಾರವೇ ಇಂಡಿಯಾ ಒಕ್ಕೂಟದ ಸಿದ್ಧಾಂತ: ಮೋದಿ

09:59 PM Mar 14, 2024 | Team Udayavani |

ನವದೆಹಲಿ: ಭ್ರಷ್ಟಾಚಾರ, ದುರಾಡಳಿತ ಮತ್ತು ರಾಷ್ಟ್ರ ವಿರೋಧಿ ಕಾರ್ಯಸೂಚಿಯನ್ನು ಉತ್ತೇಜಿಸುವುದೇ ಪ್ರತಿಪಕ್ಷ ಇಂಡಿಯಾ ಒಕ್ಕೂಟದ ಸಿದ್ಧಾಂತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ಧಾಳಿ ನಡೆಸಿದರು.

Advertisement

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ಯೋಜನೆಯ ಫ‌ಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಜನರ ಅಭಿವೃದ್ಧಿ ಮೂಲಕ ದೇಶದ ಅಭಿವೃದ್ಧಿಯೇ ನನ್ನ ಸಿದ್ಧಾಂತವಾಗಿದೆ’ ಎಂದರು.

“ಹಗಲು ಮತ್ತು ರಾತ್ರಿ ನನ್ನನ್ನು ನಿಂದಿಸುವ ಅಜೆಂಡಾದೊಂದಿಗೆ ಪ್ರತಿಪಕ್ಷಗಳೆಲ್ಲಾ ಒಂದಾಗಿವೆ’ ಎಂದು ದೂರಿದರು.

“ಪ್ರಧಾನಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ಯೋಜನೆಯು ಲಕ್ಷಾಂತರ ಮಂದಿ ಬೀದಿಬದಿ ವ್ಯಾಪಾರಿಗಳ ಕುಟುಂಬಗಳಿಗೆ ವರದಾನವಾಗಿದೆ. ಅವರು ತಮ್ಮ ವ್ಯಾಪಾರವನ್ನು ವೃದ್ಧಿಸಲು ಸುಲಭವಾಗಿ ಸಾಲ ದೊರೆಯಲಿದೆ. ಈ ಯೋಜನೆಯಡಿ ಇದುವರೆಗೆ 62 ಲಕ್ಷಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳಿಗೆ ಸುಮಾರು 11,000 ಕೋಟಿ ರೂ. ಸಾಲ ದೊರೆತಿದೆ. ಹಿಂದಿನ ಸರ್ಕಾರಗಳು ಬೀದಿಬದಿ ವ್ಯಾಪಾರಿಗಳನ್ನು ಕಡೆಗಣಿಸಿದ್ದವು. ಈ ಹಿಂದೆ ಬ್ಯಾಂಕ್‌ಗಳಿಂದ ಇವರಿಗೆ ಸಾಲ ದೊರೆಯುವುದೇ ದುಸ್ತರವಾಗಿತ್ತು’ ಎಂದು ಪ್ರಧಾನಿ ಮೋದಿ ಹೇಳಿದರು. ಕಾರ್ಯಕ್ರಮದಲ್ಲಿ ದೆಹಲಿಯ 1 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಪ್ರಧಾನಿ ಮೋದಿ ಅವರು ಸಾಲ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next