Advertisement

ಹಂಗಳೂರು: ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ

10:56 AM Feb 09, 2018 | Team Udayavani |

ಕುಂದಾಪುರ: ಹಂಗಳೂರು ಗ್ರಾಮದ ನೇರಂಬಳ್ಳಿಯ ಹುಚ್ಕೆàರಿಯ ಗದ್ದೆಯೊಂದರಲ್ಲಿ ಅರೆ ಬೆಂದ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಮೃತದೇಹವೊಂದು ಅನುಮಾನಾಸ್ಪದವಾಗಿ ಪತ್ತೆಯಾಗಿದೆ.

Advertisement

ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪ್ರಕರಣ ಬೆಳಕಿಗೆ ಬಂದಿದೆ.  ಸುಮಾರು 40 ವರ್ಷ ಪ್ರಾಯದ ವ್ಯಕ್ತಿಯ ಶವ   ಅರೆ ಸುಟ್ಟ ಕಾರಣದಿಂದ ಗುರುತು ಪತ್ತೆ ಅಸಾಧ್ಯವಾಗಿದೆ. ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಎರಡು ದಿನಗಳ ಹಿಂದೆ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳೀಯರೋರ್ವರು  ನಡೆದು ಕೊಂಡು ಹೋಗುತ್ತಿದ್ದಾಗ ಶವ ಗಮನಕ್ಕೆ ಬಂದಿದೆ.

ಘಟನೆ ನಡೆದ ಗದ್ದೆಯ ಸುತ್ತಲಿನ ಪ್ರದೇಶ ಅಲ್ಲಲ್ಲಿ ಸುಟ್ಟು ಹೋಗಿದೆ. ಆದರೆ  ಮೃತದೇಹವಿದ್ದ ಅಕ್ಕಪಕ್ಕ ಅಷ್ಟೊಂದು ಸುಟ್ಟು ಹೋಗಿಲ್ಲ.  ಕೊಲೆ ಮಾಡಿ ಇಲ್ಲಿ ತಂದು ಹಾಕಿ, ಗದ್ದೆಗೆ ಬೆಂಕಿ ಕೊಟ್ಟಿರುವ ಸಾಧ್ಯತೆಯೂ ಇದೆ. ಈ ಭಾಗದಲ್ಲಿ ಜುಗಾರಿ   ನಡೆಯುವ ಬಗ್ಗೆ ದೂರುಗಳಿದ್ದು,  ಆ ಸಂಬಂಧಿ ಜಗಳದಿಂದಾಗಿ ಕೊಲೆ ನಡೆದಿರುವ ಸಾಧ್ಯತೆಯೂ ಇದೆ ಎಂಬ ಅನುಮಾನವನ್ನು  ಸ್ಥಳೀಯರು  ವ್ಯಕ್ತಪಡಿಸಿದ್ದಾರೆ. 

ಸ್ಥಳಕ್ಕೆ ಡಿವೈಎಸ್‌ಪಿ ಪ್ರವೀಣ್‌ ನಾಯಕ್‌, ಕುಂದಾಪುರ ಠಾಣಾಧಿಕಾರಿ ಹರೀಶ್‌ ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ. ಮೃತದೇಹ ವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.

Advertisement

 ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next