Advertisement

ಹಾಡಿಗಳ ಗಿರಿಜನರತ್ತ ಸುಳಿಯದ ಕೊರೊನಾ ಸೋಂಕು!

03:41 PM May 06, 2021 | Team Udayavani |

ಎಚ್‌.ಡಿ.ಕೋಟೆ: ಕೊರೊನಾ ಮೊದಲ ಅಲೆನಗರ, ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿತ್ತು.ಅಲ್ಲೊಂದು ಇಲ್ಲೊಂದು ಸೋಂಕಿನ ಪ್ರಕರಣಗಳುಹಳ್ಳಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಇದೀಗ2ನೇ ಅಲೆ ವ್ಯಾಪಕವಾಗಿ ಹರಡಿ ಹಳ್ಳಿಗಳಿಗೂತಗುಲಿದರೂ ಹಾಡಿಗಳಿಗೆ ಮಾತ್ರ ಯಾರೊಬ್ಬರಿಗೂಸೋಂಕು ಹರಡಿಲ್ಲ.

Advertisement

ಜಿಲ್ಲೆಯಲ್ಲಿ ಎಚ್‌.ಡಿ.ಕೋಟೆ, ಹುಣಸೂರು,ಪಿರಿಯಾಪಟ್ಟಣ ತಾಲೂಕುಗಳಲ್ಲಿ ಸಾಕಷ್ಟುಹಾಡಿಗಳು ಇವೆ. ಕೋಟೆ ತಾಲೂಕಿನಲ್ಲಿ ಸುಮಾರು120 ಆದಿವಾಸಿಗರ ಹಾಡಿಗಳಿವೆಯಾದರೂ ಇಲ್ಲಿಯತನಕ ಯಾವುದೇ ಹಾಡಿಯಿಂದಯಾವೊಬ್ಬ ಆದಿವಾಸಿಗೂ ಕೊರೊನಾ ಸೋಂಕುತಗುಲಿರುವುದು, ಅದರಿಂದ ಮೃತಪಟ್ಟಿರುವುದು ವರದಿಯಾಗಿಲ್ಲ. ಹಾಡಿಗಳ ಯಾರೊಬ್ಬರೂ ಕೂಡ ಲಸಿಕೆಬೇಕೆಂದು ಆಸ್ಪತ್ರೆಗೆ ಕಾಲಿಟ್ಟಿಲ್ಲ.

ಅಧಿಕಾರಿಗಳ ತಂಡಹಾಡಿಗಳಿಗೆ ಭೇಟಿ ನೀಡಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದ್ದರೂ ಅದಕ್ಕೆ ಕ್ಯಾರೇ ಎಂದಿಲ್ಲ. “ನಮಗೆಯಾವ ಕೊರೊನಾ ಗಿರಾನಾವೂ ಇಲ್ಲ, ನಮಗ್ಯಾಕೆಲಸಿಕೆ, ಸಿಟಿ ಜನರಿಗಷ್ಟೇ ಕೊರೊನಾ ಬರುತ್ತದೆ’ಎಂದು ಅಧಿಕಾರಿಗಳನ್ನೇ ಬೈದು ಕಳುಹಿಸಿದ್ದಾರೆ.ಅಷ್ಟರ ಮಟ್ಟಿಗೆ ತಮ್ಮ ತಮ್ಮ ಪ್ರದೇಶಗಳಲ್ಲಿ ಸೋಂಕುಹರಡದಂತೆ ಆರೋಗ್ಯ ಕಾಪಾಡಿಕೊಂಡಿದ್ದಾರೆ.

ಜನರೊಟ್ಟಿಗೆ ಬೆರೆಯಲ್ಲ: ಆದಿವಾಸಿವರು ವಿನಾಕಾರಣ ನಗರ ಪ್ರದೇಶಗಳಿಗೆ ಸಂಚರಿಸುವುದು ವಿರಳ. ಇನ್ನು ವಾಹನಗಳಲ್ಲಿ ಆದಿವಾಸಿಗರ ಸಂಚಾರ ತೀರ ಕಡಿಮೆ. ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು ಹಾಡಿಗಳಲ್ಲೇ ಉಳಿಯುವುದರಿಂದ ಆದಿವಾಸಿಗರಿಗೆ ಸೋಂಕುಹರಡಿಲ್ಲ. ಇಡೀ ವಿಶ್ವವೇ ಸೋಂಕಿನಿಂದ ನಲುಗಿಹೋಗಿದ್ದರೆ ಆದಿವಾಸಿಗರು ಯಾವುದೇ ಭಯಭೀತಿ ಇಲ್ಲದೇ ಹಾಡಿಗಳಲ್ಲಿ ಮಕ್ಕಳೊಟ್ಟಿಗೆ ಸಹಜಜೀವನ ನಡೆಸುತ್ತಾ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಭಾರತ ಸೇರಿದಂತೆ ವಿಶ್ವವೇ ಕೊರೊನಾಸೋಂಕು, ಸಾವು ನೋವುಗಳಿಂದ ಬೆಚ್ಚಿ ಬಿದ್ದಿದ್ದರೆಹಾಡಿಗಳ ಜನರಿಗೆ ಮಾತ್ರ ಕೊರೊನಾ ಎಂದರೇನುಎಂಬುದೇ ತಿಳಿದಿಲ್ಲ. ಅದರ ಪರಿವೇ ಇಲ್ಲ.

ರೋಗ ನಿರೋಧಕ ಶಕ್ತಿ ವೃದ್ಧಿ: ಗಿರಿಜನರುಹೊರಗಡೆ ತಿರುಗಾಡುವುದು ಬಹಳ ಕಡಿಮೆ. ಕೆಲಹಾಡಿಗಳಲ್ಲಿ ಕೂಲಿ ಕೆಲಸಕ್ಕಾಗಿ ಕೊಡಗು,ಮೈಸೂರು, ಕೇರಳ ರಾಜ್ಯದ ಶುಂಠಿ, ಕಾಫಿ ತೋಟಕ್ಕೆಹೋಗುತ್ತಾರೆ. ತೋಟಗಳ ಮಾಲಿಕರೇ ಅವರನ್ನುತಮ್ಮ ತಮ್ಮ ವಾಹನಗಳಲ್ಲಿ ಕರೆದೊಯ್ದು ಕೆಲಸಮುಗಿದ ನಂತರ ಹಾಡಿಗಳಿಗೆ ವಾಪಸ್‌ ತಂದುಬಿಡುತ್ತಾರೆ. ಹೊರಗಡೆ ಸುತ್ತಾಡಿದರೂ ಇದುವರೆಗೂ ಯಾರಿಗೂ ಸೋಂಕು ಹರಡಿಲ್ಲ.

Advertisement

ಇದಕ್ಕೆಮುಖ್ಯ ಕಾರಣ ಆದಿವಾಸಿಗಳಲ್ಲಿ ರೋಗನಿರೋಧಕ ಶಕ್ತಿ ಗುಣ ಇರುವುದು. ಅರಣ್ಯದಲ್ಲಿದೊರೆಯುವ ಪೌಷ್ಟಿಕ ಆಹಾರಗಳಾದ ಗೆಡ್ಡೆಗೆಣಸು,ನಾರು ಬೇರುಗಳ ಕಷಾಯ, ಸೊಪ್ಪು ಸೇವನೆಯಿಂದಆದಿವಾಸಿಗರ ರೋಗ ನಿರೋಧಕ ಶಕ್ತಿ ಹೆಚ್ಚಾಗಿಸೋಂಕು ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದು ತಿಳಿದು ಬಂದೆ. ಪ್ರಕೃತಿ ಮಧ್ಯದಲ್ಲಿಕಾಡಿಂಚಿನಲ್ಲಿರುವ ಆದಿವಾಸಿಗರು ಮೊದಲಿನಂತೆಯೇ ಯಾವ ರೋಗ ರುಜನಿಗಳಿಲ್ಲದೇಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಒಂದುವೇಳೆ ಕಾಯಿಲೆ, ಜ್ವರ ಕಾಣಿಸಿಕೊಂಡರೆ ಮನೆಮದ್ದನ್ನೇ ಬಳಸಿಕೊಂಡು ಗುಣಮುಖರಾಗಿ, ತಮ್ಮತಮ್ಮ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

ಮಕ್ಕಳಿಗೆ ಅರಣ್ಯಪರಿಸರವೇ ಪಾಠಶಾÇಪ್ರಸ್ತುತ ಕೊರೊನಾ ಹಾಗೂ ಕರ್ಫ್ಯೂಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆಇರುವುದರಿಂದ ಆನ್‌ಲೈನ್‌ ಕ್ಲಾಸ್‌ಗಳುನಡೆಯುತ್ತಿವೆ. ಆದರೆ, ಹಾಡಿಗಳ ಮಕ್ಕಳಿಗೆಆನ್‌ಲೈನ್‌ ಕ್ಲಾಸ್‌ ಪದದ ಅರ್ಥವೇ ತಿಳಿದಿಲ್ಲ.ಸ್ಥಳೀಯ ಶಾಲೆಗಳು ಆರಂಭವಾದರೆ ಮಾತ್ರತರಗತಿಗಳಿಗೆ ಹಾಜರಾಗುತ್ತಾರೆ. ಇಲ್ಲದಿದ್ದರೆಹಾಡಿಯ ಪರಿಸರ, ಅರಣ್ಯ, ಗಿಡಮರಗಳೇಅವರಿಗೆ ಪಾಠಶಾಲೆಯಾಗಿರುತ್ತದೆ.ಕಾಡುಕುಡಿಗಳು ಮರಕೇತಿ ಹಾಡುತ್ತಾ, ಸಾಕುಪ್ರಾಣಿಗಳೊಂದಿಗೆ ಬೆರೆಯುತ್ತಾ, ಗೆಡ್ಡೆ ಗೆಣಸುಹುಡುಕುತ್ತಾ ರಜೆ ದಿನಗಳನ್ನುಸಂಭ್ರಮಿಸುತ್ತಿದ್ದಾರೆ.

ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next