Advertisement

ಬುದ್ದ ವಿಹಾರದಲ್ಲಿ ಬೌದ್ದ ಧರ್ಮಕ್ಕೆ ಮತಾಂತರ

04:15 PM Dec 07, 2021 | Shwetha M |

ವಿಜಯಪುರ: ಜಲನಗರ ಪ್ರದೇಶದಲ್ಲಿರುವ ಸಾರಿಪುತ್ರ ಬುದ್ಧ ವಿಹಾರದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಪರಿನಿರ್ವಾಣದ ಅಂಗವಾಗಿ ಸೋಮವಾರ ಹಲವರು ಬೌದ್ಧ ಧರ್ಮ ಸ್ವೀಕರಿಸಿದರು.

Advertisement

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಡಾ| ಬಾಬಾಸಾಹೇಬ ಅಂಬೇಡ್ಕರ್‌ ಅವರ 65ನೇ ಮಹಾಪರಿನಿರ್ವಾಹಣ ದಿನವಾದ ಡಿ. 6ರಂದು ನಗರದಲ್ಲಿರುವ ಸಾರಿಪುತ್ರ ಬುದ್ಧ ವಿಹಾರದಲ್ಲಿ ಬೌದ್ಧ ಧರ್ಮ ಮತಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದದ ರಾಜ್ಯ ಸಂಘಟನಾ ಸಂಚಾಲಕರಾದ ಜಿತೇಂದ್ರ ಕಾಂಬಳೆ ಪ್ರತಿಜ್ಞೆ ಬೋಧಿಸಿದರು.

ಸಂಜು ಕಂಬಾಗಿ, ಸುಖದೇವ ಮೇಲಿನಕೇರಿ, ಚಂದ್ರು ಮೇಲಿನಕೇರಿ, ಶಂಕರ ಚಲವಾದಿ, ಸಂಗಪ್ಪ ಪಡಗಾರ, ಸುನಂದಾ ದೊಡಮನಿ, ಸಂಗು ಕಿರಸೂರ, ಮಲ್ಲು ಮಡ್ಡಿಮನಿ, ಭೀಮು ಉತ್ನಾಳ ಸೋಮನಾಥ ರಣದೇವಿ, ಯಲ್ಲಪ್ಪ ಕಾಂಬಳೆ, ಹುಚ್ಚಪ್ಪ ಲೋಕೂರ, ಮುರುಗೇಶ ದೊಡ್ಡಣ್ಣವರ, ಮಹಾಂತೇಶ ರಾಠೊಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next