Advertisement

ದಿವಾಳಿತನ ಕಾಯ್ದೆ ತಿದ್ದುಪಡಿ

06:00 AM May 24, 2018 | |

ಹೊಸದಿಲ್ಲಿ: ಕೇಂದ್ರ ಸರಕಾರವು ದಿವಾಳಿತನ ಕಾಯ್ದೆಗೆ ತಿದ್ದುಪಡಿ ತಂದಿದ್ದು ಹಲವು ಮಹತ್ವದ ಅಂಶಗಳನ್ನು ಸೇರಿಸಲಾಗಿದೆ. ಈ ಹಿಂದೆ ಸರಕಾರಿ ಸಮಿತಿ ಸೂಚಿಸಿದ ಶಿಫಾರಸುಗಳನ್ನು ತಿದ್ದುಪಡಿಯಲ್ಲಿ ಒಳಪಡಿಸಲಾಗಿದೆ. ಆದರೆ ಇದರಲ್ಲಿನ ಅಂಶಗಳ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

Advertisement

ರಿಯಾಲ್ಟಿ ಕಂಪೆನಿ ದಿವಾಳಿಯಾಗಿ ಬ್ಯಾಂಕ್‌ ಜಪ್ತಿ ಮಾಡಿದಾಗ, ಆ ಕಂಪೆನಿಯಿಂದ ಮನೆ ಖರೀದಿ ಮಾಡಿದವರಿಗೂ ವಸೂಲಾತಿ ಮೊತ್ತದಲ್ಲಿ ಪಾಲು ನೀಡಬೇಕು ಎಂಬ ಅಂಶ ಸೇರಿಸುವಂತೆ ಸಮಿತಿ ಸಲಹೆ ನೀಡಿತ್ತು. ಹಲವು ರಿಯಾಲ್ಟಿ ಕಂಪೆನಿಗಳು ಮನೆ ಖರೀದಿಗೆ ಗ್ರಾಹಕರಿಂದ ಮುಂಗಡ ಪಾವತಿ ಮಾಡಿಸಿಕೊಂಡು, ಅನಂತರ ದಿವಾಳಿ ಘೋಷಣೆ ಮಾಡಿದಾಗ ಗ್ರಾಹಕರು ಮೋಸ ಹೋಗುತ್ತಿದ್ದರು. ಅವರು ಪಾವತಿ ಮಾಡಿ ದ ಮೊತ್ತವೂ ವಾಪಸ್‌ ಸಿಗುತ್ತಿರಲಿಲ್ಲ, ಮನೆಯೂ ಸಿಗುತ್ತಿರಲಿಲ್ಲ. ಆದರೆ ಮನೆ ಸ್ವಾಧೀನಪಡಿಸಿಕೊಳ್ಳದ ಗ್ರಾಹಕರಿಗೆ, ದಿವಾಳಿಯಾದ ಕಂಪೆನಿಯಿಂದ ವಶಪಡಿಸಿಕೊಂಡ ಸ್ವತ್ತಿನ ಮೌಲ್ಯದಲ್ಲಿ ಪಾಲು ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಇದರ ಜತೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೂ ಕೆಲವು ರಿಯಾಯಿತಿಗಳನ್ನು ಈ ತಿದ್ದುಪಡಿ ಅಡಿ ನೀಡಲಾಗಿದೆ.

ಮೊಬೈಲ್‌ ನೆಟ್‌ವರ್ಕ್‌: ಈಶಾನ್ಯ ರಾಜ್ಯಗಳು ಮತ್ತು ನಕ್ಸಲ್‌ ಬಾಧಿತ ಪ್ರದೇಶಗಳಿಗೆ ಮೊಬೈಲ್‌ ನೆಟ್‌ವರ್ಕ್‌ ಒದಗಿಸುವುದಕ್ಕಾಗಿ 14,025 ಕೋಟಿ ರೂ.ಗಳನ್ನು ಕೇಂದ್ರ ಸಚಿವ ಸಂಪುಟ ಮೀಸಲಿಡಲು ನಿರ್ಧರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next