Advertisement

“Join ABVP” ಭಿತ್ತಿಪತ್ರದಿಂದ ವಿವಾದ: ಸಿಯುಕೆ ಕ್ಯಾಂಪಸ್‌ನಲ್ಲಿ ಸಂಘರ್ಷ

11:27 PM Sep 15, 2023 | Team Udayavani |

ಕಲಬುರಗಿ: ಕಸದ ಡಬ್ಬಿ ಮೇಲೆ ಸ್ವಾಮಿ ವಿವೇಕಾನಂದರ ಭಾವಚಿತ್ರ ಇರುವ “ಜಾಯಿನ್‌ ಎಬಿವಿಪಿ’ ಎನ್ನುವ ಭಿತ್ತಿಪತ್ರ ಅಂಟಿಸಿದ್ದನ್ನು ತನ್ನ ಫೇಸ್‌ಬುಕ್‌ನಲ್ಲಿ “ನೋಯಿಂಗ್‌ ಯುವರ್‌ ಪ್ಲೇಸ್‌’ ಎಂದು ಅಣಕಿಸಿದ್ದ ವಿದ್ಯಾರ್ಥಿಯನ್ನು ಅಮಾನತು ಮಾಡಿರುವುದು ಹಾಗೂ ಆತನ ವಿರುದ್ಧ ಪ್ರಕರಣ ದಾಖಲು ಮಾಡಿರುವುದನ್ನು ಪ್ರಶ್ನಿಸಿ ಶುಕ್ರವಾರ ಸಿಯುಕೆ ಕ್ಯಾಂಪಸ್‌ನಲ್ಲಿ ಅಂಬೇಡ್ಕರ್‌ ವಿದ್ಯಾರ್ಥಿ ಸಂಘಟನೆ ಸದಸ್ಯರು ಕುಲಪತಿಯವರ ಕಾರಿಗೆ ಘೇರಾವ್‌ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಈ ಘೇರಾವ್‌ ತಡೆಯಲು ಎಬಿವಿಪಿ ವಿದ್ಯಾರ್ಥಿ ಸಂಘಟನೆಯವರು ಎನ್ನಲಾದ ಕೆಲವು ವಿದ್ಯಾರ್ಥಿಗಳು, ಕುಲಪತಿ ಅವರನ್ನು ಕಾಪಾಡಲು ಮುಂದಾದಾಗ ಎರಡೂ ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ತಿಕ್ಕಾಟ ನಡೆದಿದೆ. ಈ ವೇಳೆ ಕುಲಪತಿಯವರ ಕಾರು ಚಾಲಕ ಜೋರಾಗಿ ಕಾರು ಚಲಾಯಿಸಿದ್ದರಿಂದ ವಿದ್ಯಾರ್ಥಿಯೊಬ್ಬನ ಕಾಲಿಗೆ ಗಾಯವಾಯಿತು ಎನ್ನುವುದು ಸಂಘರ್ಷ ತುಸು ಹೆಚ್ಚಾಗಲು ಕಾರಣವಾಯಿತು.

ಈ ವೇಳೆ ಕುಲಪತಿ ಪ್ರೊ| ಬಟ್ಟು ಸತ್ಯನಾರಾಯಣ ಅವರು ಕಾರಿನಿಂದ ಇಳಿದು ಒಂದೂವರೆ ಕಿ.ಮೀ. ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಏರ್ಪಟ್ಟಿತ್ತು. ಉದ್ವಿಗ್ನತೆ ಪರಿಸ್ಥಿತಿ ಹೆಚ್ಚಾದಾಗ ವಿವಿಯ ಕೆಲವು ಅಧಿಕಾರಿಗಳು ಎಬಿವಿಪಿ ಸಂಘಟನೆಯವರು ಎನ್ನಲಾದ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುವಲ್ಲಿ ನೆರವಾದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next