Advertisement

ವದಂತಿ ನಂಬಿ ಹಲ್ಲೆ ಮಾಡುವ ಘಟನೆ ನಿಯಂತ್ರಿಸಿ

01:50 PM Jul 06, 2018 | Team Udayavani |

ಹೊಸದಿಲ್ಲಿ /ಮುಂಬಯಿ: ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿನ ವದಂತಿಗಳನ್ನು ನಂಬಿ ಥಳಿಸುವ, ಕೊಲೆಗೈಯ್ಯುವಂಥ ಪ್ರಕರಣಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ರಾಜ್ಯಗಳಿಗೆ ಸೂಚನೆ ನೀಡಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಕ್ಕಳ ಕಳ್ಳರು ಎಂಬ ವದಂತಿಗಳನ್ನು ನಂಬಿ ಕಿಡಿಗೇಡಿಗಳ ಗುಂಪು ಸುಮಾರು 20ಕ್ಕೂ ಅಧಿಕ ಮಂದಿಯನ್ನು ಕೊಂದು ಹಾಕಿದ ಬೆನ್ನಲ್ಲೇ ಕೇಂದ್ರದಿಂದ ಇಂಥದ್ದೊಂದು ನಿರ್ದೇಶನ ಬಂದಿದೆ. “ಮಕ್ಕಳ ಕಳ್ಳರು, ಇತರ ಸುಳ್ಳು ಸುದ್ದಿ ಹರಡುವ ಮೊದಲೇ ನಿಯಂತ್ರಿಸಬೇಕು. ಜಿಲ್ಲಾಧಿಕಾರಿಗಳು ಸಮುದಾಯಗಳ ಜತೆ ಸಭೆ ನಡೆಸಿ, ಅರಿವು ಮೂಡಿಸಬೇಕು’ ಎಂದು ಸೂಚಿಸಲಾಗಿದೆ.

Advertisement

ಹೆಲ್ಪ್ಲೈನ್‌: ಮುಂಬೈ ಪೊಲೀಸರು ನಗರದ ವಿವಿಧ ಭಾಗಗಳಲ್ಲಿ ವದಂತಿಗಳಿಂದ ಉಂಟಾಗುವ ಗೊಂದಲ ಬಗ್ಗೆ ನೆರವು ಪಡೆಯಲು ಹಲವು ಫೋನ್‌ ನಂಬರ್‌ಗಳನ್ನು ನೀಡಿದ್ದಾರೆ. ಇದೇ ವೇಳೆ ಮಣಿಪುರದಲ್ಲಿ ಗುರುವಾರ ಮಕ್ಕಳ ಕಳ್ಳರು ಎಂದು ಭಾವಿಸಿ ಇಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next