Advertisement

ಶೀಘ್ರ ಎಲ್ಲ ವಾರ್ಡ್‌ಗಳಿಗೆ ನಿರಂತರ ನೀರು; ಅನಿಲ ಬೆನಕೆ

06:53 PM Oct 28, 2021 | Team Udayavani |

ಬೆಳಗಾವಿ: ನಗರದ ಜನರ ಬಹು ದಿನದ ಬೇಡಿಕೆಯಾದ ನಿರಂತರ ನೀರು ಪೂರೈಸುವ ಯೋಜನೆಗೆ ಕರ್ನಾಟಕ ಸರ್ಕಾರವು ಸ್ಪಂದಿಸಿದ್ದು ವಿಶ್ವ ಬ್ಯಾಂಕ್‌ನ ನೆರವಿನೊಂದಿಗೆ ಕರ್ನಾಟಕ ನಗರ ನೀರು ಸರಬರಾಜು ವಲಯ ಸುಧಾರಣಾ ಯೋಜನೆ ನೀರು ಪೂರೈಕೆಯಡಿ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಒಂಬತ್ತು ಲಕ್ಷ ಜನರು ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಶಾಸಕ ಅನಿಲ ಬೆನಕೆ ಹೇಳಿದರು.

Advertisement

ನಗರದ ಹೊರವಲಯದ ಬಸವನಕೊಳ್ಳದ ಬಳಿ ನೂತನವಾಗಿ ಆರಂಭಿಸಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬುಧವಾರ ಸಂಸದೆ ಮಂಗಲಾ ಅಂಗಡಿ ಅವರೊಂದಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಗರದ ಜನರಿಗೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂದರು.

ಈಗಾಗಲೇ ಹಿಡಕಲ್‌ ಜಲಾಶಯದಿಂದ ಬೆಳಗಾವಿಗೆ 31 ಕೋಟಿ ವೆಚ್ಚದಲ್ಲಿ ಪೈಪ್‌ ಲೆ„ನ್‌ ಅಳವಡಿಸುವ ಮೂಲಕ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಅತಿ ಶೀಘ್ರದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಈಗಾಗಲೇ 30 ಎಂ ಎಲ್‌ ಡಿ ಗಾತ್ರದ ನೀರಿನ ಶುದ್ಧೀಕರಣ ಕೇಂದ್ರವಿದ್ದು, ಈಗ 31 ಎಂಎಲ್‌ಡಿ ಕೇಂದ್ರದ ಶುದ್ಧೀಕರಣ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.

ಸಂಸದೆ ಮಂಗಲಾ ಅಂಗಡಿ ಮಾತನಾಡಿ, ಶುದ್ಧ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಶೀಘ್ರ ಪೂರ್ಣಗೊಂಡು ನಗರದ ಎಲ್ಲ ವಾರ್ಡ್‌ಗಳ ಜನರು ನಿರಂತರ ನೀರಿನ ಸೌಲಭ್ಯವನ್ನು ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆ.ಆರ್‌.ಡಿ.ಎಸ್‌ ವ್ಯವಸ್ಥಾಪಕ ಅಭಿಯಂತರ ಪ್ರಭಾಕರ್‌ ಶೆಟ್ಟಿ ಮಾತನಾಡಿ, ಈ ಯೋಜನೆಯನ್ನು ವಿಶ್ವ ಬ್ಯಾಂಕ್‌ ನ ನೆರವಿನೊಂದಿಗೆ ಕರ್ನಾಟಕ ನಗರ ನೀರು ಸರಬರಾಜು ವಲಯ ಸುಧಾರಣಾ ಯೋಜನೆಯಡಿ ಕೈಗೊಳ್ಳಲಾಗಿದೆ. ಈಯೋಜನೆ ಅಡಿಯಲ್ಲಿ ಪ್ರಾಯೋಗಿಕವಾಗಿ ಈಗಾಗಲೇ ಪಾಲಿಕೆಯ 10 ವಾರ್ಡ್‌ ಗಳಲ್ಲಿ ನಿರಂತರ ನೀರು ಪೂರೈಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಯೋಜನೆಯಲ್ಲಿ 2008 ರಿಂದ ಇದುವರೆಗೂ 11378 ನೀರಿನ ಸಂಪರ್ಕವನ್ನು ನೀಡಿದ್ದು, 117246 ಜನರು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.

ಯೋಜನೆಯಡಿ ಎಲ್ಲ 58 ವಾರ್ಡ್‌ ಗಳಿಗೆ ನೀರು ಪೂರೈಸಲಾಗುವುದು 2011ರ ಜನಗಣತಿಯ ಪ್ರಕಾರ 4.8 ಲಕ್ಷ ಜನರು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲಿದ್ದು 2053 ನೇ ಸಾಲಿನ ಜನಗಣತಿಗೆ ಅನುಗುಣವಾಗಿ ಯೋಜನೆಯ ಪ್ರಕಾರ 9.67 ಲಕ್ಷ ಜನ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲಿದ್ದಾರೆ ಎಂದರು.

Advertisement

ಈ ಯೋಜನೆಯನ್ನು 2053ನೇ ಸಾಲಿನ ಜನಸಂಖ್ಯೆಗೆ ಅನುಗುಣವಾಗಿ ತಯಾರಿಸಲಾಗಿದ್ದು 2053 ರ ವೇಳೆಗೆ 9.67 ಲಕ್ಷ ಜನಸಂಖ್ಯೆಗೆ 184 ಎಂ.ಎಲ್‌. ಡಿ ರಷ್ಟು ನೀರಿನ ಬೇಡಿಕೆ ಇದ್ದು ಈಗ ಇರುವ ಎರಡು ಜಲಾಶಯಗಳಿಂದ 136 ಎಂ.ಎಲ್‌.ಡಿ ನೀರು ಲಭ್ಯವಿದೆ. ಉಳಿದ 48 ಎಂ.ಎಲ್‌.ಡಿ ನೀರನ್ನು ಹಿಡಕಲ್‌ ಜಲಾಶಯದಿಂದ ಹಂಚಿಕೆ ಮಾಡಲು ನೀರಾವರಿ ಇಲಾಖೆಯಿಂದ ಅನುಮೋದನೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಗಟು ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆಯನ್ನು ಸಾಧಿಸಲಾಗಿದೆ.ವಿತರಣಾ ವ್ಯವಸ್ಥೆಯಲ್ಲಿ ನೀರಿನ ಪೈಪ್‌ಗ್ಳನ್ನು ಬದಲಾಯಿಸಿ ನೀರಿನ ಸೋರಿಕೆಯನ್ನು ಕಡಿಮೆ ಮಾಡಲಾಗಿದೆ. ಕಂದಾಯ ವಸೂಲಿಗಾಗಿ ಶೇ.100 ರಷ್ಟು ಗ್ರಾಹಕರಿಗೆ ಮೀಟರ ಅಳವಡಿಸಲಾಗಿದ್ದು, ನಿಯಮಿತ ಬಿಲ್ಲುಗಳನ್ನು ವಿತರಿಸಿ ಶೇ. 90 ರಷ್ಟು ನೀರಿನ ಕರ ವಸೂಲಾತಿ ಮಾಡಲಾಗಿದೆ ಎಂದರು. ನೀರಿನ ಬಳಕೆ ಪ್ರಮಾಣದಲ್ಲಿ ಉಳಿತಾಯದ ಪ್ರಾತ್ಯಕ್ಷಿಕ ವಲಯದ ಅನುಭವದ ಪ್ರಕಾರ ನೀರಿನ ಬಳಕೆ ಪ್ರಮಾಣ ಪ್ರತಿ ದಿನ ಪ್ರತಿ ವ್ಯಕ್ತಿಗೆ 90 ಲೀಟರ್‌ ಇದೆ. ಇದರಿಂದ ನೀರಿನ ಬಳಕೆಯ ಪ್ರಮಾಣದಲ್ಲಿ ಶೇ. 32 ರಷ್ಟು ಉಳಿತಾಯ ಸಾಧಿಸಲಾಗಿದೆ.

ನೀರು ಸರಬರಾಜು ಯೋಜನೆಗೆ ಸಂಬಂಧಪಟ್ಟ ದೂರುಗಳನ್ನು ನಿರ್ವಾಹಕರು ನಿರ್ದಿಷ್ಟ ಅವಧಿಯಲ್ಲಿ ಸರಿಪಡಿಸುವ ಗುರಿ ಇರುವುದರಿಂದ ನಿಗದಿತ ಅವಧಿಯಲ್ಲಿ ದೂರುಗಳಿಗೆ ಸ್ಪಂದಿಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ, ನಗರ ಸೇವಕರಾದ ರಾಜಶೇಖರ ಡೋಣಿ, ಬಿಜೆಪಿ ಮುಖಂಡರಾದ ಮಹಾದೇವ ಕೆ. ರಾಠೊಡ, ಮುರುಘೇಂದ್ರಗೌಡಾ ಪಾಟೀಲ, ಭೆ„ರಗೌಡ ಪಾಟೀಲ, ಮಾಜಿ ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಎಲ್‌ ಆ್ಯಂಡ್‌ ಟಿ ಕಂಪನಿಯ ಅಧಿಕಾರಿಗಳಾದ ಹರಿಕಾಂತ ದೇಸಾಯಿ, ದುರ್ಗೇಶ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next