Advertisement

ಸಿದ್ದು ಜಾರಿಗೊಳಿಸಿದ ಯೋಜನೆ ಮುಂದುವರಿಕೆ

07:00 AM Aug 10, 2018 | Team Udayavani |

ಬೆಂಗಳೂರು: ಶಾದಿಭಾಗ್ಯ, ಮಾತೃಪೂರ್ಣ ಸೇರಿ ಸಿದ್ದರಾಮಯ್ಯ ಅವರು ಘೋಷಿಸಿದ್ದ ಎಲ್ಲ ಯೋಜನೆಗಳೂ ಸಮ್ಮಿಶ್ರ ಸರ್ಕಾರದಲ್ಲಿ ಮುಂದುವರಿಯಲಿವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್‌ ಅಹಮದ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಅನ್ನಭಾಗ್ಯದಡಿ ಅಕ್ಕಿ ವಿತರಣೆ ಸೇರಿ ಎಲ್ಲ ಗೊಂದಲಗಳೂ ಬಗೆಹರಿದಿದ್ದು
ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ಎಲ್ಲ ಯೋಜನೆಗಳೂ ಮುಂದುವರಿಯಲಿವೆ ಎಂದು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ, ಯಾವುದೇ ಯೋಜನೆಗೆ ಅನುದಾನ ಕಡಿತ ಮಾಡಿಲ್ಲ ಎಂದು ಹೇಳಿದ್ದಾರೆ. ಶಾದಿಭಾಗ್ಯ
ಯೋಜನೆ ಅನುದಾನ ಕಡಿತ ಆಗಿಲ್ಲ. 2013-14ರಲ್ಲಿ 10 ಕೋಟಿ ರೂ. ನೀಡಲಾಗಿತ್ತು. 2014-15 ರಲ್ಲಿ 38ಕೋಟಿ ರೂ. ನೀಡಲಾಯಿತು. 2016-17ರಲ್ಲಿ 137 ಕೋಟಿ ರೂ. ನೀಡಲಾಗಿತ್ತು. ಆಗ ಹೆಚ್ಚು ಅರ್ಜಿ ಬಂದಿದ್ದರಿಂದ ಹೆಚ್ಚು
ಅನುದಾನ ದೊರೆತಿತ್ತು. ಹೀಗಾಗಿ, ಕಡಿತ ಪ್ರಶ್ನೆಯಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next