Advertisement

ದೇವೇಗೌಡರು ಸ್ಪರ್ಧಿಸಿದರೆ ಮಾತ್ರ ಸ್ಪರ್ಧೆ: ಸಂಸದ ಜಿ.ಎಸ್‌.ಬಸವರಾಜು

10:24 PM Jul 23, 2022 | Team Udayavani |

ತುಮಕೂರು: ವಯೋ ಸಹಜ ಹಿನ್ನೆಲೆ ನಾನೂ ಚುನಾವಣಾ ನಿವೃತ್ತಿ ಹೊಂದುತ್ತೇನೆ, ಮುಂದಿನ ಬಾರಿ ಸ್ಪರ್ಧೆ ಮಾಡಲ್ಲ, ವಯಸ್ಸಿನ ಹಿನ್ನೆಲೆ ಪಕ್ಷ ನನಗೆ ಟಿಕೆಟ್‌ ಕೊಡಲ್ಲ. ಆದರೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತುಮಕೂರಿನಿಂದ ಒಮ್ಮೆ ಆದರೂ ಎಂಪಿ ಆಗಬೇಕು ಎಂದಿದ್ದಾರೆ. ಅವರು ಸ್ಪರ್ಧಿಸಿದರೆ ಅವರ ವಿರುದ್ಧ ನಾನೂ ಸ್ಪರ್ಧೆ ಮಾಡುತ್ತೇನೆ. ಪಕ್ಷ ಟಿಕೆಟ್‌ ಕೊಡದಿದ್ದರೂ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಸಂಸದ ಜಿ.ಎಸ್‌.ಬಸವರಾಜು ನುಡಿದರು.

Advertisement

ಪತ್ರಕರ್ತರೊಂದಿಗೆ ಚುನಾವಣಾ ರಾಜಕೀಯದಿಂದ ಯಡಿಯೂರಪ್ಪ ನಿವೃತ್ತಿ ಘೋಷಣೆ ವಿಚಾರವಾಗಿ ಮಾತಾಡು ವಾಗ ಈ ವಿಷಯ ಪ್ರಸ್ತಾಪಿಸಿದ ಅವರು, ಬಿ.ಎಸ್‌.ಯಡಿಯೂರಪ್ಪ ನಿವೃತ್ತಿ ಘೋಷಣೆ ಮಾಡಲ್ಲ, ಅವರು ರಾಜಕೀಯದಲ್ಲಿ ಸಕ್ರಿಯವಾಗಿ ಇರುತ್ತಾರೆ ಎಂದರು.

ಅವರು ನಿಂತ ನೀರಲ್ಲ, ಬದುಕಿರುವವರೆಗೂ ಹೋರಾಟ ಮಾಡುತ್ತಾರೆ. ಯಡಿಯೂರಪ್ಪ ಮೈನಸ್‌ ಆದರೆ ಬಿಜೆಪಿಗೆ ಬಹಳ ಕಷ್ಟ. ಯಾವುದೇ ಕಾರಣಕ್ಕೂ ಬಿಜೆಪಿ ಅವರನ್ನು ಬಿಡುವುದಿಲ್ಲ.

ಬಿಜೆಪಿ ಬಿಟ್ಟು ಹೋದರೆ ಅವರಿಗೆ ಸುಖ, ಯಶಸ್ಸು ಇರಲ್ಲ. ಅವರ ಸೇವೆ ಬಿಜೆಪಿಗೆ ಬೇಕೇ ಬೇಕು. ಒಂದಕ್ಕೊಂದು ಅವಿನಾಭಾವ ಸಂಬಂಧ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next