Advertisement

ಧಾರಕಾರ ಮಳೆ: ಮನೆ ಗೋಡೆ ಕುಸಿದು ಮಹಿಳೆ ಸಾವು

03:28 PM Sep 07, 2019 | Suhan S |

ಶಿವಮೊಗ್ಗ : ಧಾರಾಕರ ಮಳೆಯಿಂದಾಗಿ ಮನೆಕುಸಿದು ಮಹಿಳೆ ಸಾವನ್ನೊಪ್ಪಿದ ಘಟನೆ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.

Advertisement

ಘಟನೆಯಲ್ಲಿ  ಅರಳಿಹಳ್ಳಿ ಗ್ರಾಮದ ಉಮೇರಾ ಅಂಜುಮ್ ಎನ್ನುವವರು ಮೃತ ಪಟ್ಟಿದ್ದಾರೆ. ಮಲಗಿದ್ದಾಗ ಬೆಳಗಿನ ಜಾವ ಉಮೇರಾ ಅಂಜುಮ್ ತಲೆಯ ಮೇಲೆಯೇ ಗೋಡೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಉಮೇರಾ ಅಂಜುಮ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವು. ಘಟನೆಯಲ್ಲಿ ಉಮೇರಾ ಅಂಜುಮ್ ಪತಿ ಜಾಫರ್ ಖಾನ್ ಬಲಗಾಲು ಮುರಿದಿದೆ. ಆದರೆ ಮೂವರು ಮಕ್ಕಳು ಸಣ್ಣಪುಟ್ಟ ಗಾಯಗಳಿಂದ ಪವಾಡ ಸದೃಷವಾಗಿ ಬಚಾವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next