Advertisement

ವಿಷ ಸೇವಿಸಿ ಯುವಕ ಆತ್ಮಹತ್ಯೆ

04:34 PM Apr 05, 2022 | Niyatha Bhat |

ಹೊಳೆಹೊನ್ನೂರು: ಕೌಟುಂಬಿಕ ಕಲಹದಿಂದ ಮನ ನೊಂದ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಅರಹತೊಳಲು ಗ್ರಾಮದಲ್ಲಿ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ. ಮೃತ ಯುವಕನನ್ನು ಎಂ.ಜಿ. ನರೇಂದ್ರ (29) ಎಂದು ಗುರುತಿಸಲಾಗಿದೆ.

Advertisement

ಈತ ತನ್ನ ತಾಯಿಯೊಂದಿಗೆ ಜಗಳವಾಡಿಕೊಂಡು ಅದೇ ಬೇಜಾರಲ್ಲಿ ಭತ್ತಕ್ಕೆ ಸಿಂಪಡಿಸುವ ಔಷಧಿ ಕುಡಿದಿದ್ದಾನೆ. ಔಷಧಿ ಕುಡಿದು ಸ್ವಲ್ಪ ಸಮಯದ ನಂತರ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡಾಗ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ನಂತರ ಆ ಗೆಳೆಯರು ಗ್ರಾಮದ ಕೆಲ ಯುವಕರಿಗೆ ಕರೆ ಮಾಡಿ ನರೇಂದ್ರ ವಿಷ ಸೇವಿಸಿರುವುದನ್ನು ತಿಳಿಸಿದ್ದಾರೆ.

ತಕ್ಷಣ ಮನೆಯ ಅಕ್ಕಪಕ್ಕದವರು ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಔಷಧ ಕುಡಿದು ತುಂಬಾ ಸಮಯವಾದ್ದರಿಂದ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮೃತಪಟ್ಟಿದ್ದಾನೆ.

ಈತನಿಗೆ ತಾಯಿ ಹಾಗೂ ಇಬ್ಬರು ಅಣ್ಣಂದಿರು ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next