Advertisement
ರಸ್ತೆಗಾಗಿ ಶ್ರಮದಾನಸ್ಥಳೀಯ ಫಲಾನುಭವಿಗಳು ರಸ್ತೆ ನಿರ್ಮಾಣದ ಶ್ರಮದಾನ ನಡೆಸಿದ್ದು ಅಲ್ಲದೆ ನಿರ್ಮಾಣದ ವೆಚ್ಚ ಸುಮಾರು ಒಂದು ಲಕ್ಷ ರೂಪಾಯಿಗಳಷ್ಟು ಧನಸಹಾಯದ ಮೂಲಕ ಭರಿಸಿದ್ದಾರೆ.
ಇದೀಗ ಮಾರ್ಗ ಪೂರ್ತಿಗೊಳ್ಳಲು ತೊಡಕಾಗಿರುವ ಮುಂಗ್ಲಿಕಾನ ತೋಡಿಗೆ ಅಣೆಕಟ್ಟು ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಅನುಮೋದನೆಗೊಳ್ಳುವ ಅಂತಿಮ ಹಂತದಲ್ಲಿದೆ ಎಂದು ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯೆ ಮಲ್ಲಿಕಾ ರೈ ತಿಳಿಸಿದ್ದಾರೆ.
Related Articles
ರಸ್ತೆಯು ಹಾದು ಹೋಗುವ ಸ್ಥಳದ ಮಾಲಕರಾದ ಐತ್ತಪ್ಪ ರೈ ಪಟ್ಟೆ, ಸದಾಶಿವ ರೈ ಬಾಳೆಮೂಲೆ, ಪ್ರಸಾದ ರೈ ಮುಂಗ್ಲಿಕ್ಕಾನ ಇವರು ರಸ್ತೆ ನಿರ್ಮಾಣಕ್ಕೆ ಬೇಕಾದ ಸ್ಥಳವನ್ನು ಉದಾರವಾಗಿ ನೀಡಿದ ಕಾರಣ ಯೋಜನೆ ಸಾಕಾರಗೊಂಡಿದೆ. ಇವರು ತಮ್ಮ ಕೃಷಿಭೂಮಿಯ ಫಲವತ್ತಾದ ಅಡಿಕೆ ಮರಗಳನ್ನು ಕಡಿದು ಮಾರ್ಗಸಾಗಲು ಸಹಕರಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
Advertisement
– ಬಾಲಕೃಷ್ಣ ಅಚ್ಚಾಯಿ