Advertisement

ಹಳೆಯ ಹೆಂಚಿನ ಬದಲು ಕಾಂಕ್ರೀಟ್‌ ಭವನ ನಿರ್ಮಾಣ: ಮೇಯರ್‌

10:16 AM Mar 18, 2018 | Team Udayavani |

ಕೋಡಿಕಲ್‌ : ಕೋಡಿಕಲ್‌ ಶಾಲಾ ರಸ್ತೆ ಬಳಿ ಇದ್ದ ಹಳೆ ಅಂಬೇಡ್ಕರ್‌ ಭವನಕ್ಕೆ ಕಾಯಕಲ್ಪ ನೀಡಲಾಗುತ್ತಿದ್ದು ಹಳೆಯ ಹೆ‌ಂಚಿನ ಬದಲು ಕಾಂಕ್ರಿಟ್‌ ಭವನ ನಿರ್ಮಾಣವಾಗಲಿದೆ ಎಂದು ಮೇಯರ್‌ ಭಾಸ್ಕರ್‌ ಕೆ. ಹೇಳಿದರು.

Advertisement

ಕೋಡಿಕಲ್‌ನಲ್ಲಿ ಅಂಬೇಡ್ಕರ್‌ ಭವನಕ್ಕೆ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕೋಡಿಕಲ್‌ ಪ್ರದೇಶದಲ್ಲಿ ಇಂದು ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ಆಗಿವೆ. ಶಶಿಧರ್‌ ಹೆಗ್ಡೆ ಅವರು ಅನುದಾನ ಹೆಚ್ಚು ತರುವ ಮೂಲಕ ಜನತೆಗೆ ಸೌಲಭ್ಯ ಒದಗಿಸಿ ನ್ಯಾಯ ಒದಗಿಸಿದ್ದಾರೆ ಎಂದರು. 

ಎರಡೂವರೆ ಸಾವಿರ ಚದರ ಅಡಿ ವಿಸ್ತೀರ್ಣದ ಭವನ
ಮುಖ್ಯ ಸಚೇತಕ, ಸ್ಥಳೀಯ ಕಾರ್ಪೊರೇಟರ್‌ ಶಶಿಧರ ಹೆಗ್ಡೆ ಮಾತನಾಡಿ, ಮಾಜಿ ಸಂಸದ ಜನಾರ್ದನ ಪೂಜಾರಿ ಅವರು ಈ ಭಾಗದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಸಹಕರಿಸಿದ್ದರು. ಇದೀಗ ಎರಡೂವರೆ ಸಾವಿರ ಚದರ ಅಡಿ ವಿಸ್ತೀರ್ಣದ ಭವನ ನಿರ್ಮಿಸಲಿದ್ದು, ಸುಮಾರು ಎಂಟು ನೂರು ಮಂದಿ ಪಾಲ್ಗೊಂಡು ಸಭೆ ಸಮಾರಂಭ ನಡೆಸಬಹುದಾಗಿದೆ. ಈಗಾಗಲೇ ಕೋಡಿಕಲ್‌ ಮುಖ್ಯ ರಸ್ತೆ ವಿಸ್ತರಣೆ, ನೆರೆ ಸಮಸ್ಯೆ ಪರಿಹಾರಕ್ಕೆ ಬೃಹತ್‌ ಕಾಲುವೆ ರಚನೆ, ಸೇತುವೆ ನಿರ್ಮಾಣ ಆಗಿದ್ದು, ಒಳ ರಸ್ತೆಗಳನ್ನೂ ಶಾಶ್ವತವಾಗಿ ಕಾಂಕ್ರೀಟ್‌ ಕಾಮಗಾರಿ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ಎಂ.ಜಿ. ರಾಮಚಂದ್ರ, ಲ್ಯಾನ್ಸಿ ಮೊಂತೆರೋ, ಮಲ್ಲಿಕಾರ್ಜುನ್‌, ದಿನೇಶ್‌ ಕೋಡಿಕಲ್‌, ಲೋಕನಾಥ್‌, ಪ್ರವೀಣ್‌, ಅಧಿಕಾರಿಗಳಾದ ಜಿ.ಎಸ್‌. ಮರಳಹಳ್ಳಿ, ಕೃಷ್ಣಾನಂದ್‌, ಲಕ್ಷ್ಮಣ್‌ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next