Advertisement
ವಿವಿಧ ಕನ್ನಡ ಪರ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ವಿವಿಧ ಗ್ರಾ.ಪಂ. ಸಹಿತ ಆಡಳಿತ ಕಚೇರಿಗಳಿಗೆ ಹಮ್ಮಿಕೊಂಡಿರುವ ಹಕ್ಕೊತ್ತಾಯ ಪ್ರತಿಭಟನ ಮೆರವಣಿಗೆ ಮತ್ತು ಸಭೆ ಅಂಗವಾಗಿ ಶನಿವಾರ ಅಪರಾಹ್ನ ಬದಿಯಡ್ಕ ಗ್ರಾ. ಪಂ. ಕಾರ್ಯಾಲಯದ ಎದುರು ನಡೆಸಿದ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಕಾಸರಗೋಡಿನ ಎಲ್ಲ ಸರಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ನೌಕರರು ಮತ್ತು ಕನ್ನಡದಲ್ಲೇ ಸುತ್ತೋಲೆ, ಅರ್ಜಿ ಸಲ್ಲಿಸುವಿಕೆ ಆಗಬೇಕೆಂಬ ಸರಕಾರದ ನಿರ್ದೇಶನವಿದ್ದರೂ ಅದು ಅನುಷ್ಠಾನಗೊಳ್ಳದಿರುವುದರಲ್ಲಿ ಕನ್ನಡಿಗರ ಪ್ರಶ್ನಿಸುವಿಕೆಯ ಕೊರತೆಯಿದೆ. ಈ ಬಗ್ಗೆ ಗಟ್ಟಿ ಧ್ವನಿಯ ಬೇಡಿಕೆ ಬರಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ. ಭಟ್, ಬಿ.ವಿ. ಕಕ್ಕಿಲ್ಲಾಯ, ಜಯರಾಮ ಮಂಜತ್ತಾಯ ಎಡನೀರು, ಕರ್ನಾಟಕ ಗಮಕ ಕಲಾ ಪರಿಷತ್ತು ಗಡಿನಾಡ ಘಟಕದ ಅಧ್ಯಕ್ಷ ಶಂಕರನಾರಾಯಣ ಭಟ್ ಟಿ., ಬ್ಲಾಕ್ ಪಂಚಾಯತ್ ಸದಸ್ಯ ಅವಿನಾಶ್ ರೈ, ವೆಂಕಟರಮಣ ಕೆದಿಲಾಯ, ಮೊಹಮ್ಮದಾಲಿ ಪೆರ್ಲ, ವಿ.ಬಿ. ಕುಳಮರ್ವ, ಪ್ರಭಾವತಿ ಕೆದಿಲಾಯ ಮೊದಲಾದವರು ಮಾತನಾಡಿದರು.
ಸಾರ್ವಜನಿಕ ಸಭೆಗೆ ಮೊದಲು ಬದಿಯಡ್ಕ ಕ್ಯಾಂಪ್ಕೋ ಪರಿಸರದಿಂದ ಬೃಹತ್ ಮೆರವಣಿಗೆ ಬದಿಯಡ್ಕ ಪ್ರಧಾನ ರಸ್ತೆಯಲ್ಲಿ ಸಾಗಿ ಗ್ರಾ.ಪಂ. ಎದುರು ಸಮಾರೋಪಗೊಂಡಿತು.
ಮೆರವಣಿಗೆಯನ್ನು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಉದ್ಘಾಟಿಸಿದರು. ಸಾರ್ವಜನಿಕ ಸಭೆ ಬಳಿಕ ಗ್ರಾ. ಪಂ. ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಅವರಿಗೆ ಮನವಿ ಸಮರ್ಪಿಸಲಾಯಿತು. ಡಾ| ಬೇ.ಸಿ. ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಸಂಯೋಜಕ ರೋಹಿತ್ ಕುಮಾರ್ ಶೆಟ್ಟಿ ವಂದಿಸಿದರು.