Advertisement

Chief Minister, ಸಚಿವರಾದರೆ ಮಾತ್ರ ಕ್ಷೇತ್ರದ ಕೆಲಸ ಆಗುವುದಾ: ಕೋಳಿವಾಡ ಪ್ರಶ್ನೆ

12:27 AM Dec 16, 2023 | Team Udayavani |

ಬೆಳಗಾವಿ: ಮುಖ್ಯಮಂತ್ರಿ ಹಾಗೂ ಸಚಿವರಾದರೆ ಮಾತ್ರ ಕ್ಷೇತ್ರದ ಕೆಲಸಗಳಾಗುತ್ತವೆ ಎನ್ನುವುದಾದರೆ, ಮೊದಲು ನನ್ನನ್ನು ಸಚಿವರನ್ನಾಗಿ ಮಾಡಿ ಎಂದು ರಾಣೆಬೆನ್ನೂರು ಕಾಂಗ್ರೆಸ್‌ ಶಾಸಕ ಪ್ರಕಾಶ ಕೋಳಿವಾಡ ಒತ್ತಾಯಿಸಿದ ಪ್ರಸಂಗ ನಡೆಯಿತು.

Advertisement

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ತಮ್ಮ ಮತಕ್ಷೇತ್ರದಲ್ಲಿ ಸುಮಾರು 2,700 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಆದರೆ ತೋಟಗಾರಿಕೆ ಇಲಾಖೆಯಿಂದ ಅಗತ್ಯ ಪ್ರೋತ್ಸಾಹ ಹಾಗೂ ಸೌಲಭ್ಯ ಸಿಗುತ್ತಿಲ್ಲ. ನಿಮ್ಮದು ಬಯಲುಸೀಮೆ, ಅಡಿಕೆ ಬೆಳೆಯುವ ಪ್ರದೇಶವಲ್ಲ ಎನ್ನುತ್ತಾರೆ. ಇದರಿಂದ ನನ್ನ ಕ್ಷೇತ್ರದ ಅಡಿಕೆ ಬೆಳೆಗಾರರಿಗೆ ಹನಿ ನೀರಾವರಿ ಸೌಲಭ್ಯದಿಂದ‌ ಅಂದಾಜು 19-20 ಕೋಟಿ ರೂ. ದೊರೆಯುತ್ತಿಲ್ಲ. ಬೆಳೆ ವಿಮೆಯಿಂದ 30 ಕೋಟಿ ರೂ. ವಂಚನೆ ಆಗುತ್ತಿದೆ ಎಂದರು.

ಬಯಲು ಸೀಮೆ ಪ್ರದೇಶ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದಲ್ಲೂ ಅಡಿಕೆ ಬೆಳೆ ಇದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುವ ಶಿಗ್ಗಾಂವಿ ಕ್ಷೇತ್ರ ಕಪ್ಪು ಭೂಮಿ. ಅಲ್ಲಿ ಅಡಿಕೆ ಬೆಳೆಗೆ ಅವಕಾಶವಿದೆ ಆದರೆ ನನ್ನ ಕ್ಷೇತ್ರಕ್ಕೆ ಅವಕಾಶ ಇಲ್ಲವೆಂದರೆ ಏನರ್ಥ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next