Advertisement

ಹಳ್ಳಿಗಳಲ್ಲಿ ಕೋನರಡ್ಡಿ ಮತಬೇಟ

10:22 AM Apr 08, 2019 | pallavi |
ನವಲಗುಂದ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ತಾಲೂಕಿನ ನಾಯಕನೂರು, ಅರಹಟ್ಟಿ, ತಡಹಾಳ, ಬೋಗಾನೂರು, ಶಲವಡಿ, ಕಣ್ಣೂರ, ದಾಟನಾಳ, ಕೊಂಗವಾಡ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಪ್ರಚಾರ ನಡೆಸಿದರು.
ನಾಯಕನೂರಲ್ಲಿ ವಿವಿಧ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಮತ ಯಾಚಿಸಿ ಮಾತನಾಡಿ, ಮಹದಾಯಿ ಕಳಸಾ-ಬಂಡೂರಿ ನ್ಯಾಯಾಧೀಕರಣದ ತೀರ್ಪು ಬಂದು ಹಲವು ತಿಂಗಳು ಕಳೆದರೂ ಅಧಿಸೂಚನೆ ಹೊರಡಿಸಲು ಆಗಿಲ್ಲ. ಇವರಿಗೆ ರೈತರ ಬಗ್ಗೆಯಾಗಲಿ, ಅಭಿವೃದ್ಧಿ ಬಗ್ಗೆಯಾಗಲಿ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು.
ಅಭ್ಯರ್ಥಿ ವಿನಯ ಕುಲಕರ್ಣಿ, ಗುರುರಾಜ ಹುಣಸಿಮರದ, ಬಿ.ಬಿ. ಗಂಗಾಧರಮಠ, ವೀರಣ್ಣ ನೀರಲಗಿ, ವಿನೋದ ಅಸೂಟಿ, ವಿಜಯ ಕುಲಕರ್ಣಿ ಇನ್ನಿತರರಿದ್ದರು.
ಬಿಜೆಪಿಯವ್ರು ಬರೀ ಪ್ರಚಾರ ಮಾಡ್ತಾರೆ. ಅವರು ಪ್ರಚಾರಶೂರರು. ಅವರ ಜೊತೆಗೆ ಮಾತನಾಡಬೇಡಿ, ಅವರು
ದಾರಿ ತಪ್ಪಿಸ್ತಾರೆ. ಬೇಕಿದ್ದರೆ ಚಹಾ ಕುಡಿಸಿ ಮನೆಗೆ ವಾಪಸ್‌ ಕಳುಹಿಸಿ, ಯಾರೊಬ್ಬರ ಜೊತೆಗೆ ಬೆರೆಯಬೇಡಿ. ಅವರನ್ನು ನಂಬಿ ಮರುಳಾಗಬೇಡಿ. ಚುನಾವಣೆ ಮುಗಿಯವರೆಗೆ ಅವರ ಜೊತೆಗೆ ಮಾತನಾಡಬೇಡಿ.
 ಎನ್‌.ಎಚ್‌. ಕೋನರಡಿ 
Advertisement

Udayavani is now on Telegram. Click here to join our channel and stay updated with the latest news.

Next