Advertisement

ಗುಜರಾತ್ ನಲ್ಲಿ ಕಾಂಗ್ರೆಸ್ 5 ಸ್ಥಾನ ಕೂಡಾ ಗೆಲ್ಲಲ್ಲ…ಪೇಪರ್ ನಲ್ಲಿ ಬರೆದುಕೊಟ್ಟ ಕೇಜ್ರಿವಾಲ್

04:29 PM Nov 05, 2022 | Team Udayavani |

ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಕಾಂಗ್ರೆಸ್ ಗುಜರಾತ್ ನಲ್ಲಿ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಕಷ್ಟ ಎಂಬುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.

Advertisement

ಇದನ್ನೂ ಓದಿ:ʼಕಾಂತಾರʼ, ʼಕೆಜಿಎಫ್‌ʼನಂತಹ ಸೌತ್‌ ಸಿನಿಮಾಗಳಿಂದ ನಾವು ಸ್ಫೂರ್ತಿ ಪಡೆಯಬೇಕು: ವರುಣ್‌ ಧವನ್

ಇಂಡಿಯಾ ಟುಡೇ ಜತೆಗಿನ ವಿಶೇಷ ಸಂವಾದದಲ್ಲಿ ಪಾಲ್ಗೊಂಡಿದ್ದ ಕೇಜ್ರಿವಾಲ್, ಗುಜರಾತ್ ಚುನಾವಣೆ ಕುರಿತು ಮಾತನಾಡಿದರು. ಕಾಂಗ್ರೆಸ್ ಪಕ್ಷವನ್ನು ಯಾರು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಗುಜರಾತ್ ಜನತೆಗೆ ಬದಲಾವಣೆಯ ಅಗತ್ಯವಿದೆ. ಒಂದು ವೇಳೆ ಜನರಿಗೆ ಬದಲಾವಣೆ ಬೇಕಾಗಿಲ್ಲ ಎಂದಾದರೆ ನಮಗೂ (ಆಪ್) ಕೂಡಾ ಯಾವುದೇ ಅವಕಾಶ ಸಿಗಲಾರದು. ನಾವು ಶೇ.30ರಷ್ಟು ಮತ ಪಡೆದು ಪಂಜಾಬ್ ನಲ್ಲಿ ಸರ್ಕಾರ ರಚಿಸಿದ್ದೇವೆ. ಆದರೆ ಗುಜರಾತ್ ನಲ್ಲಿ ರಾಜಕೀಯ ಲೆಕ್ಕಾಚಾರ ಭಿನ್ನವಾಗಿದೆ ಎಂದು ಹೇಳಿದರು.

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 5 ಸ್ಥಾನಗಳಲ್ಲಿಯೂ ಗೆಲುವು ಸಾಧಿಸಲಾರದು ಎಂದ ಕೇಜ್ರಿವಾಲ್, ಪೇಪರ್ ನಲ್ಲಿ ಲಿಖಿತವಾಗಿ ಬರೆದುಕೊಡುವ ಮೂಲಕ ತಾನು ಹೇಳಿರುವ ಭವಿಷ್ಯದ ಬಗ್ಗೆ ಇದು ಸಾಕ್ಷಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next