Advertisement

ಕಾಂಗ್ರೆಸ್‌ಗೆ ಜಯ: ಕಾರ್ಯಕರ್ತರ ಸಂಭ್ರಮ

12:40 PM Apr 14, 2017 | Team Udayavani |

ಕೆ.ಆರ್‌.ನಗರ: ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾದ ಕಳಲೆ ಎನ್‌. ಕೇಶವಮೂರ್ತಿ, ಗೀತಾ ಮಹದೇವಪ್ರಸಾದ್‌ ಗೆಲುವು ಸಾಧಿಸುತ್ತಿದ್ದಂತೆಯೇ ಇತ್ತ ತಾಲೂಕಿನ ಹೊಸೂರು ಗ್ರಾಮದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

Advertisement

ಗ್ರಾಮದ ಆಸ್ವತ್ರೆ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದ‌ರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್‌. ಹೆಚ್‌.ಸಿ. 
ಮಹದೇವಪ್ಪ, ತನ್ವೀರ್‌, ಶಾಸಕ ಕೆ.ವೆಂಕಟೇಶ್‌ ಅವರ ಪರವಾಗಿ ಜಯದ ಘೋಷಣೆಗಳನ್ನು ಕೂಗಿ ಅಲ್ಲಿನ ಮತದಾರರನ್ನು ತಾಲೂಕಿನ ಕಾಂಗ್ರೆಸ್‌ ಪಕ್ಷದ ಪರವಾಗಿ ಅಭಿನಂದಿಸಿದರು

ಜಿಲ್ಲಾ ಡಿಡಿಸಿ ಸದಸ್ಯ ಹೆಚ್‌.ಜೆ.ರಮೇಶ್‌ ಮತ್ತು ಹಳಿಯೂರು ಗ್ರಾಪಂ ಸದಸ್ಯ ಹೆಚ್‌.ಎಲ್‌.ಮಹದೇವ ಮುಖ್ಯಮಂತ್ರಿ ಸಿದ್ದರಾಮಯ್ಯರ ಹತ್ತಾರು ಜನಪರ ಕಾರ್ಯಕ್ರಮಗಳು ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ರಕ್ಷೆಯಾಗಿದ್ದು ಇದು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥ್‌, ಮಾಜಿ ಸದಸ್ಯ ಹೆಚ್‌.ಎಸ್‌.ರವಿ, ಡೈರಿ ಅಧ್ಯಕ್ಷ ಸುರೇಶ್‌, ಮುಖಂಡರಾದ ಶ್ರೀನಿವಾಸ್‌, ಕಾಯಿರೇವಣ್ಣ, ಮಹಾಲಿಂಗು, ದಿಡ್ಡಹಳ್ಳಿ ಕಾರ್‌ಮಹೇಶ್‌, ಐಪಿ ವೆಂಕಟೇಶ್‌, ಮಹೇಂದ್ರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next