Advertisement

ಕಾಂಗ್ರೆಸ್ ಗೆದ್ದಿದ್ದು ಬಿಜೆಪಿಯ ತಪ್ಪಿನಿಂದ: ಪ್ರಜ್ವಲ್ ರೇವಣ್ಣ

01:27 PM May 16, 2023 | Team Udayavani |

ಚಿಕ್ಕಮಗಳೂರು: ಕಾಂಗ್ರೆಸ್ಸಿಗರು ಕಾಂಗ್ರೆಸ್ ಅಲೆಯಲ್ಲಿ ಗೆದ್ದಿಲ್ಲ, ಬಿಜೆಪಿಯ ತಪ್ಪಿನಿಂದ ಗೆದ್ದಿದ್ದಾರೆ ಅಷ್ಟೆ. ಬಿಜೆಪಿಯ ಮೀಸಲಾತಿ, ಹಿಜಬ್ ನಂತಹಾ ನಿರ್ಧಾರದಿಂದ ಗೆದ್ದಿರುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

Advertisement

ಕಡೂರಿನ ಯಗಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು, ಅದರ ಹಿಂದೆ ಅವರಿಗೆ ದೊಡ್ಡ ಜಬಾವ್ದಾರಿಯಿದೆ. ಮಹಿಳೆಯರಿಗೆ 2000 ರೂ., ಫ್ರೀ ಬಸ್, ಯುವಕರಿಗೆ ಸ್ಟೈಫಂಡ್, ಉಚಿತ ವಿದ್ಯುತ್ ಎಲ್ಲಾ ಜಾರಿಗೆ ಬರಲಿ. ನಂಬಿಕೆ ಇಟ್ಟು ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ, ಜನ ಕಾಯುತ್ತಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡು ಹೇಗೆ ನಿಭಾಯಿಸುತ್ತಾರೆಂದು ನೋಡೋಣ ಎಂದರು.

ಸರ್ಕಾರ ಬಂದು 48 ಗಂಟೆಯೂ ಕಳೆದಿಲ್ಲ, ಹರಿಪ್ರಸಾದ್ ಈಗಲೇ ಯೂಟರ್ನ್ ಹೊಡೀತಿದ್ದಾರೆ ಎಪಿಎಲ್ ಕಾರ್ಡ್ ನವರಿಗೆ, ತೆರಿಗೆ ಕಟ್ಟುವವರಿಗೆ ಇಲ್ಲ, ಬಿಪಿಎಲ್ ನವರಿಗೆ ಮಾತ್ರ ಎನ್ನುದ್ದಾರೆ ಎಂದರು.

ಇದನ್ನೂ ಓದಿ:ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಬರಲಿ ಎಂದು ಹಾರೈಸೋಣ. ಈಗಲೇ ಚರ್ಚೆ ಬೇಡ, ಸರ್ಕಾರದ ನಿಜ ರೂಪ ಹೊರಬರಬೇಕು. ಎರಡು ತಿಂಗಳು ಕಳೆಯಲಿ, ಸಿಎಂ, ಸಚಿವರು ಎಲ್ಲರೂ ಪ್ರಮಾಣ ವಚನ ಸ್ವೀಕರಿಸಲಿ. ಕೊಟ್ಟ ಮಾತನ್ನ ಹೇಗೆ ಉಳಿಸಿಕೊಳ್ಳುತ್ತಾರೆ ನೋಡಿ ಚರ್ಚಿಸೋಣ ಎಂದು ಪ್ರಜ್ವಲ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next