Advertisement

ಕಾಂಗ್ರೆಸ್ v/s ಜೆಡಿಎಸ್‌;ಜಿಪಂನಲ್ಲಿ ಭವಾನಿ,ಮಂಜು ಪುತ್ರನ ವಾಗ್ಸಮರ!

03:20 PM Sep 28, 2018 | |

ಹಾಸನ: ದೋಸ್ತಿ ಸರ್ಕಾರವಿದ್ದರೂ ಹಾಸನದಲ್ಲಿ ಮಾತ್ರ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಜಿದ್ದು ಮುಂದುವರಿದಿದ್ದು , ಶುಕ್ರವಾರ ಜಿ.ಪಂ ಸ್ಥಾಯಿ ಸಮಿತಿಯಲ್ಲಿ  ಅಸಮಾಧಾನ ಸ್ಫೋಟಗೊಂಡಿದೆ. 

Advertisement

ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ವಿಚಾರದಲ್ಲಿ ಮಾಜಿ ಸಚಿವ ಎ.ಮಂಜು ಪುತ್ರ, ಕಾಂಗ್ರೆಸ್‌ ಜಿ.ಪಂ.ಸದಸ್ಯ ಮಂಥರ್‌ ಗೌಡ ಮತ್ತು ಜಿ.ಪಂ ಸದಸ್ಯೆ,ಸಚಿವ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ನಡುವೆ  ತೀವ್ರ ವಾಗ್ವಾದ ನಡೆದಿದೆ. 

ಮಂಥರ್‌ ಅವರು 37 ಶಾಸಕರಿದ್ದರೂ ನಿಮಗೆ ಸಿಎಂ ಸ್ಥಾನ ನೀಡಿದ್ದೇವೆ ಎಂದು ಕೆಣಕಿದರು. ಮಂಥರ್‌ಗೆ ತಿರುಗೇಟು ನೀಡಿದ ಭವಾನಿ ಅವರು ಸಮ್ಮಿಶ್ರ ಸರ್ಕಾರದ ಕುರಿತು ಇಲ್ಲಿ ಮಾತನಾಡುವುದು ಬೇಡ. ಅದಕ್ಕೆ ವಿಧಾನಸೌಧ ಇದೆ  ಹಿರಿಯ ವ್ಯಕ್ತಿಗಳು ಇದ್ದಾರೆ ಅಲ್ಲಿ ಕುಳಿತು ಚರ್ಚೆ ಮಾಡಿ ಎಂದು ಕೆಂಡಾಮಂಡಲವಾದರು. 

ಈ ವೇಳೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಭಾರಿ ವಾಕ್ಸಮರ ನಡೆದಿದೆ. ಎ.ಮಂಜು ಅವರು ಸಚಿವ ರೇವಣ್ಣ ಅವರ ವಿರುದ್ದ ಈಗಾಗಲೇ ಭೂ ಹಗರಣದ ಆರೋಪ ಮಾಡುವ ಮೂಲಕ ಸಮರ ಆರಂಭಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next