Advertisement

ದೇಶ ಲೂಟಿ ಮಾಡಿದ ಕಾಂಗ್ರೆಸ್‌

04:13 PM Apr 21, 2019 | pallavi |

ದೋಟಿಹಾಳ: ಸಮೀಪದ ಶಿರಗುಂಪಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಪರವಾಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಚುನಾವಣೆ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಕಳೆದ ಐದು ವರ್ಷಗಳ ಅವಧಿಯಲ್ಲಿ ಮೋದಿ ಅವರು ಯಾವುದೇ ಹಗರಣ ಮಾಡಿದೇ ದೇಶವನ್ನು ಸುಭದ್ರವಾಗಿ ನಡೆಸಿದ್ದಾರೆ. ಮತ್ತೂಮ್ಮೆ ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಸಂಗಣ್ಣ ಕರಡಿ ಅವರಿಗೆ ಮತಹಾಕಬೇಕು ಎಂದು ಮನವಿ ಮಾಡಿದರು. ಜಿಪಂ ಸದಸ್ಯ ಕೆ. ಮಹೇಶ ಮಾತನಾಡಿ, ದೇಶದಲ್ಲಿ ಸದ್ಯ ಮೋದಿ ಅಲೆ ಇದೆ.

Advertisement

ಈ ಚುನಾವಣೆ ದೇಶದ ಸ್ವಾಭಿಮಾನದ ಚುನಾವಣೆಯಾಗಿದೆ. ವಿಶ್ವವೇ ಭಾತರದ ಕಡೆಗೆ ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡೆಸಿದ್ದಾರೆ. ದೇಶವನ್ನು 60 ವರ್ಷ ಆಳಿದ ಕಾಂಗ್ರೆಸ್‌ ಸೈನಿಕರಿಗೆ ಬುಲೆಟ್ ಪ್ರುಫ್‌ ಜಾಕೆಟ್ ಕೊಡಿಸಲು ಆಗಿರಲಿಲ್ಲ, ಇವರು ಮೋದಿ ಬಗ್ಗೆ ಮಾತನಾಡುತ್ತಿದಾರೆ. ಇಂದು ದೇಶದಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಎದೆಗಾರಿಕೆ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ. ದೇಶದಲ್ಲಿ ಮತ್ತೂಮ್ಮೆ ಮೋದಿ ಸರಕಾರ ಬರಲು ಸಂಗಣ್ಣ ಕರಡಿ ಅವರಿಗೆ ಮತ ನೀಡಬೇಕೆಂದರು. ತಾಪಂ ಸದಸ್ಯ ಮಹಾಂತೇಶ ಬಾದಾಮಿ ಮಾತನಾಡಿದರು. ಕುಷ್ಟಗಿ ಸುರೇಶ ಮಂಗಳೂರು, ಶೇಖರಗೌಡ ಮಾಲಿಪಾಟೀಲ್ ಬಳೂಟಗಿ, ಸಿದ್ದಪ್ಪ ಮೇಟಿ, ಮಹೇಶ ಕೋನಸಾಗರ, ಶಿರಗುಂಪಿ-ಬಳೂಟಗಿ ಗ್ರಾಮಗಳ ಜನರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next