Advertisement

ಕಾಂಗ್ರೆಸ್‌ ಮುಕ್ತ ಕರ್ನಾಟಕ ಆಗಲೇಬೇಕು

08:00 AM Jan 11, 2018 | Team Udayavani |

ಚಿತ್ರದುರ್ಗ: ಕಾಂಗ್ರೆಸ್‌ ಮುಕ್ತ ಭಾರತ ಮಾಡಬೇಕಾದರೆ ಕಾಂಗ್ರೆಸ್‌ ಮುಕ್ತ ಕರ್ನಾಟಕ ಆಗಲೇಬೇಕು. ಕರ್ನಾಟಕ
ವನ್ನು ಕಾಂಗ್ರೆಸ್‌ ಮುಕ್ತ ಮಾಡಿದರೆ ಸುಲಭವಾಗಿ ಕಾಂಗ್ರೆಸ್‌ ಮುಕ್ತ ದೇಶವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ
ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಹೊಳಲ್ಕೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅ ಧಿಕಾರಕ್ಕೆ ಬಂದ ಮೇಲೆ 2500 ರೈತರ ಆತ್ಮಹತ್ಯೆ, 1521 ಕೊಲೆ, 19 ಸಾವಿರಕ್ಕೂ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ನಡೆದಿವೆ. ರಾಜ್ಯ ಸರ್ಕಾರ ಲೂಟಿ, ದರೋಡೆ ಮಾಡುತ್ತಿದೆ. ರೈತರು, ಜನಸಾಮಾನ್ಯರ ವಿರೋಧಿ ನಿಲುವು ತಾಳಿರುವ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿ ಒಂದು ಕ್ಷಣವೂ ಇರಲು ನೈತಿಕತೆ ಉಳಿಸಿಕೊಂಡಿಲ್ಲ ಎಂದರು.

ಮೋದಿ, ಅಮಿತ್‌ ಶಾ ಆಸೆಯಂತೆ ರಾಜ್ಯದಲ್ಲಿ 150 ಸೀಟುಗಳನ್ನು ನಾವು ಪಡೆದು ಮಾದರಿ ಸರ್ಕಾರ ರಚಿಸಬೇಕಿದೆ.
ರಾಜಕೀಯ ಚಾಣಾಕ್ಷ ಅಮಿತ್‌ ಶಾ ತಂತ್ರಗಾರಿಕೆ ಮುಂದೆ ಯಾರೂ ನಿಲ್ಲುವುದಿಲ್ಲ. ಮೋದಿಯವರನ್ನು ಟೀಕಿಸುವ
ನೈತಿಕತೆ ಕಾಂಗ್ರೆಸ್ಸಿಗಿಲ್ಲ. ಸಿದ್ದರಾಮಯ್ಯ ಸರ್ಕಾರದ ಆಡಳಿತ ವೈಖರಿ ನೋಡಿ ರಾಜ್ಯದ ಜನತೆ ಸಿದ್ದರಾಮಯ್ಯ
ನವರನ್ನು ಮನೆಗೆ ಕಳುಹಿಸಲು ತಯಾರಿ ನಡೆಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next