Advertisement

ದೇಶದ ಮಹಾನ್‌ ಪುತ್ರ ವಾಜಪೇಯಿ ನಿಧನಕ್ಕೆ ರಾಹುಲ್‌, ಕಾಂಗ್ರೆಸ್‌ ಶೋಕ

07:20 PM Aug 16, 2018 | udayavani editorial |

ಹೊಸದಿಲ್ಲಿ : ಧೀಮಂತ ನಾಯಕ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತೀವ್ರ ಶೋಕ, ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ತಮ್ಮ ರಾಜಕೀಯ ಸಿದ್ಧಾಂತಕ್ಕೆ ಸೇರದವರಲ್ಲಿಯೂ ಸ್ಫೂರ್ತಿ ತುಂಬಿದ ಬೆರಳೆಣಿಕೆಯ ನಾಯಕರಲ್ಲಿ ಓರ್ವರಾಗಿರುವ ವಾಜಪೇಯಿ, ಭಾರತ ಮಾತೆಯ ಮಹಾನ್‌ ಪುತ್ರ; ಕೋಟ್ಟಂತರ ಭಾರತೀಯರ ಪ್ರೀತಿ, ಗೌರವಕ್ಕೆ ಪಾತ್ರರಾದ ಮಹಾನ್‌ ನಾಯಕ; ಅವರ ನಿಧನದಿಂದ ನಮಗೆಲ್ಲ ದುಃಖವಾಗಿದೆ; ಅವರಿಗೆ ಚಿರಶಾಂತಿ ಲಭಿಸಲೆಂದು ಪ್ರಾರ್ಥಿಸುತ್ತೇವೆ’ ಎಂದು ರಾಹಲ್‌ ಗಾಂಧಿ ವಾಜಪೇಯಿ ಅವರ ವ್ಯಕ್ತಿತ್ವವನ್ನು  ವರ್ಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next